Join The Telegram | Join The WhatsApp |
ಹರಪನಹಳ್ಳಿ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿ ಕಾಗೋಷ್ಠಿಯನ್ನು ಕೆಪಿಸಿಸಿ ಸದಸ್ಯರಾದ ಎಂ.ಪಿ ವೀಣಾ ಮಹಾಂತೇಶ್ ಅವರು ಹಮ್ಮಿಕೊಂಡಿದ್ದರು. ಈ ಪತ್ರಿಕಾಗೋಷ್ಠಿಯಲ್ಲಿ 18/11/2022 ರಂದು 67ನೇ ಕನ್ನಡ ರಾಜ್ಯೋತ್ಸವ ಆಚರಣೆ, ದಿ.ಶ್ರೀ ಎಂಪಿ ರವೀಂದ್ರ ರವರ ನಾಲ್ಕನೇ ಪುಣ್ಯ ಸ್ಮರಣೆ ಹಾಗೂ ಡಾ. ಪುನೀತ್ ರಾಜಕುಮಾರ್ ಅವರ ಪ್ರಥಮ ಪುಣ್ಯ ಸ್ಮರಣೆ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹರಪನಹಳ್ಳಿ ಪಟ್ಟಣದ ಎಸ್ ಸಿ ಎಸ್ ಫಾರ್ಮಸಿ ಕಾಲೇಜ್ ಜ್ಞಾನಗಂಗೋತ್ರಿ ಆ ವರಣದಲ್ಲಿ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಶ್ರೀ ಚಂದ್ರಶೇಖರ್ ಕಂಬಾರ ಅವರ ಕಾದಂಬರಿ ಆಧಾರಿತ ”ಕರಿಮಾಯಿ” ನಾಟಕವನ್ನು ಸ್ಪಂದನ ರಂಗ ತಂಡ ಬೆಂಗಳೂರು ಇವರು ಪ್ರಸ್ತುತ ಪಡಿಸಲಿದ್ದಾರೆ. ಶ್ರೀ ವರಸದ್ಯೋಜಾತ ಶಿವಾಚಾ ರ್ಯ ಮಹಾಸ್ವಾಮಿಗಳು ತೆಗ್ಗಿನ ಮಠ ಸಂಸ್ಥಾನ, ಹರಪನ ಹಳ್ಳಿ ಹಾಗೂ ಶ್ರೀ ಚನ್ನಬಸವ ಶಿವಯೋಗಿ ಸ್ವಾಮಿಗಳು, ಗುಡ್ಡದ ವಿರಕ್ತ ಸಂಸ್ಥಾನ ಮಠ ನೀಲಗುಂದ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ, ಶ್ರೀಮತಿ ರುದ್ರಾಂಬ ಎಂಪಿ.ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಈ ಕಾಯ೯ಕ್ರಮ ನಡೆಯುವುದು. ಉ ದ್ಘಾಟನೆಯನ್ನು ಮಾಜಿ ರಾಜ್ಯಸಭಾ ಸದಸ್ಯರು ಹಾಗೂ ಖ್ಯಾತ ರಂಗಕರ್ಮಿಗಳಾದ ಶ್ರೀಮತಿ ಬಿ.ಜಯಶ್ರೀ ಅವರು ನೆರವೇರಿಸುವರು.
ಈ ಕಾಯ೯ಕ್ರಮದ ಸಂಪೂರ್ಣ ವಿವರಣೆ ನೀಡಿದ ಎಂ .ಪಿ ವೀಣಾ ಮಹಾಂತೇಶ್ ಕೆಪಿಸಿಸಿ ವಕ್ತಾರರು ಹಾಗೂ ಕೆಪಿಸಿಸಿ ಸದಸ್ಯರು ಅವರು ಪತ್ರಿಕಾ ಮಾಧ್ಯಮದ ಮೂ ಲಕ ಹರಪನಹಳ್ಳಿಯ ಕಲಾ ಆಸಕ್ತರು ,ಕಲಾ ಪೋಷಕರು, ಶ್ರೀ ಎಂ.ಪಿ ಪ್ರಕಾಶ್, ಶ್ರೀ ಎಂಪಿ ರವೀಂದ್ರ ಅವರ ಅಭಿ ಮಾನಿ ಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಬೇಕೆಂ ದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಕವಿತಾ ವಾಗೀಶ್ ಮಾಜಿ ಪು ರಸಭಾ ಅಧ್ಯಕ್ಷರು, ಗಾಯತ್ರಿ ದೇವಿ ಚಿಗಟೇರಿ, ರೇಖಮ್ಮ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು ಚಿಗಟೇರಿ, ಸಿದ್ದಲಿಂಗನ ಗೌಡ್ರು ಕೆಪಿಸಿಸಿ ಮಾನವನ ಹಕ್ಕುಗಳು, ಕಾನೂನು ಮತ್ತು ಮಾಹಿತಿ ವಿಭಾಗದ ಜಿಲ್ಲಾಧ್ಯಕ್ಷರು,ದಾದಾಪೀರ್ ಮಕರಬ್ಬಿ ಯೂತ್ ಕಾಂಗ್ರೆಸ್ ಉಪಾಧ್ಯಕ್ಷರು ಹರಪನಹಳ್ಳಿ ಬ್ಲಾಕ್, ನೇತ್ರಾವತಿ ಯೂಥ್ ಕಾಂಗ್ರೆಸ್ ಜಿಲ್ಲಾಪ್ರಧಾನ ಕಾರ್ಯದ ರ್ಶಿಗಳು, ಮತ್ತಿಹಳ್ಳಿ ಬೆಟ್ಟನಗೌಡ್ರು ಮಾಜಿ ಗ್ರಾಮ ಪಂಚಾ ಯತಿ ಅಧ್ಯಕ್ಷರು, ಗುರುಬಸವರಾಜ್ ಅಸಂಘಟಿತ ಕಾ ರ್ಮಿಕ ಘಟಕದ ಅಧ್ಯಕ್ಷರು ಹರಪನಹಳ್ಳಿ ಬ್ಲಾಕ್, ರೇಣು ಕಾ, ಮಮತಾ, ದೇವರ ತಿಮ್ಲಾಪುರದ ನಾಗರಾಜ್, ದೇವ ರ ತಿಮ್ಲಾಪುರದ ಮುರುಡಪ್ಪ, ತಳವಾರ್ ಕಾರ್ತಿಕ್ ಯೂ ಥ್ ಕಾಂಗ್ರೆಸ್ ಜಿಲ್ಲಾಪ್ರಧಾನ ಕಾರ್ಯದರ್ಶಿಗಳು, ಗಂಗ ಜ್ಜಿ ನಾಗರಾಜ್ ಯೂಥ್ ಕಾಂಗ್ರೆಸ್ ಜಿಲ್ಲಾ ಕಾರ್ಯದ ರ್ಶಿಗಳು , ತಳವಾರ್ ಶಿವರಾಜ್ ಎನ್ ಎಸ್ ಯು ಐ ಜಿಲ್ಲಾ ಉಪಾಧ್ಯಕ್ಷರು, ಅರುಣ್ ಕುಮಾರ್ ಕುರುಬ ಸ ಮಾಜದ ಯುವ ಪ್ರಧಾನ ಕಾರ್ಯದರ್ಶಿಗಳು, ಗೋವೇ ನಹಳ್ಳಿ ರಮೇಶ್, ಶಿವಮೂರ್ತಿ ಸ್ವಾಮಿ ಎಚ್ ಎಂ, ಕಡಬ ಗೆರೆ ತಾತಪ್ಪ, ಕಡಬಗೆರೆ ನಾರಪ್ಪ, ಹುಣಸೆಹಳ್ಳಿ ಸುರೇಶ್, ಮದ್ದಾನಸ್ವಾಮಿ, ಪ್ರಜ್ವಲ್ ಕುಮಾರ್, ಬಾಗಳಿ ರಮೇಶ್, ಹಗರಿ ಗುಡಿಹಳ್ಳಿ ಗೋಪಿ, ಹುಣಸೆಹಳ್ಳಿ ಸಂತೋಷ್, ನಾ ಗರಾಜ್ ಲೋಲೇಶ್ವರ ಹಾಗೂ ಇನ್ನಿತರ ಮುಖಂಡರುಗ ಳು ಇದ್ದರು.
Join The Telegram | Join The WhatsApp |