ಗೋಕಾಕ:ತಂದೆ ಮರಣಾಂತರ ತಮ್ಮ ಜಮೀನು ಬಿಟ್ಟು ಕೊಡಲು ಕೇಳಲು ಹೋದವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಕುಲಗೋಡ ಪೋಲಿಸ ಠಾಣೆಯ ಗೋಕಾಕ ತಾಲೂಕಿನ ಉದಗಟ್ಟಿ ಗ್ರಾಮದಲ್ಲಿ ನಡೆದಿದೆ.
ಉದಗಟ್ಟಿ ಗ್ರಾಮದಲ್ಲಿರುವ ಸರ್ವೆ ನಂಬರ 10 ನಲ್ಲಿ 18 ಎಕರೆ ಜಮೀನಿನಲ್ಲಿ ಉದ್ದಪ್ಪ ಲಕ್ಕಪ್ಪ ಗೋಡೇರ ಇತ ತನ್ನ ತಂದೆ ಲಕ್ಕಪ್ಪ ಮರಣಾಂತರ ತಮ್ಮ ಜಮೀನನ್ನು ಉಪಬೋಗ ಮಾಡುತ್ತಿರುವ ಸಿದ್ದಪ್ಪ ಬೂತಪ್ಪ ಗೋಡೇರ ಮತ್ತು ಸಹೋದರರಿಗೆ ತಮ್ಮ ಜಮೀನ ಬಿಟ್ಟು ಕೊಡಲು ವಿನಂತಿಸಿದಾಗ ಎಕಾಎಕಿ ಕುಡಗೋಲಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆಂದು ಹಲ್ಲೆಗೊಳಗಾದ ಉದ್ದಪ್ಪ ಲಕ್ಕಪ್ಪ ಗೋಡೇರ ಇತ ಆರೋಪಿಸಿದ್ದಾನೆ.
ಇನ್ನು 20 ವರ್ಷಗಳಿಂದ ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತ ನಮ್ಮ ಜಮೀನನ್ನು ಸಿದ್ದಪ್ಪ ಬೂತಪ್ಪ ಗೋಡೇರ ಮತ್ತು ಸಹೋದರರು ಉಪಬೋಗ ಮಾಡುತಿದ್ದರು. ಈಗ ಅದನ್ನು ಬಿಟ್ಟು ಕೊಡಲು ಕೇಳಿದರೆ ನನ್ನ ಸಹೋದರಿಗೆ ಹಾಗೂ ನನ್ನ ಮೇಲೆ ಕುಡಗೋಲಿನಿಂದ ಹಲ್ಲೆ ಮಾಡುತಿದ್ದಾಗೆ ಬಿಡಿಸಲು ಬಂದ ನನ್ನ ತಾಯಿಯ ಮೇಲೆಯೂ ಕೂಡ ಹಲ್ಲೆ ಮಾಡಿದ್ದಾರೆ.
ಇದರಿಂದ ಕುಪಿತಗೊಂಡು ನಾನು ಕೂಡ ಅವರಲ್ಲಿನ ಸಿದ್ದಪ್ಪ ಬೂತಪ್ಪ ಗೋಡೇರ ಎಂಬಾತನ ಮೇಲೆ ನಾನು ಹಲ್ಲೆ ಮಾಡಿದ್ದೇನೆಂದು ಉದ್ದಪ್ಪ ಗೋಡೇರ ಹೇಳಿದ್ದಾನೆ ಇನ್ನು ಗಂಬೀರ ಗಾಯಗೊಂಡವರನ್ನು ಗೋಕಾಕ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ ಇನ್ನೊರ್ವ ಸಿದ್ದಪ್ಪ ಗೋಡೆರ ಎಂಬಾತನಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಆಸ್ಪತ್ರೆಗೆ ಕಳಿಸಿದ್ದಾರೆಂದು ತಿಳಿದು ಬಂದಿದೆ.
ವರದಿ:ಮನೋಹರ ಮೇಗೇರಿ