Ad imageAd image

ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಿಗೆ ಬೀಳ್ಕೊಡುಗೆ ಸಮಾರಂಭ

Bharath Vaibhav
ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಿಗೆ ಬೀಳ್ಕೊಡುಗೆ ಸಮಾರಂಭ
WhatsApp Group Join Now
Telegram Group Join Now

ಹಟ್ಟಿ ಚಿನ್ನದ ಗಣಿ : ಶ್ರೀ ಶರಣಬಸವೇಶ್ವರ ಜನಕಲ್ಯಾಣ ಶಿಕ್ಷಣ ಸಂಸ್ಥೆ ಅಡಿಯಲ್ಲಿ ದ್ವೀತಿಯ ಪಿಯುಸಿ ವಿಭಾಗದ 2024-25 ನೇ ಸಾಲಿನ ದ್ವೀತಿಯ ಪಿಯುಸಿ ವಿಭಾಗದವರ ಬೀಳ್ಕೊಡುಗೆ ಸಮಾರಂಭವನ್ನ ಪ್ರಥಮ ಪಿಯುಸಿ ವಿದ್ಯಾರ್ಥಿನಿಯರಿಂದ ಏರ್ಪಡಿಸಲಾಗಿತ್ತು .


ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನವನ್ನ ಆಡಳಿತ ಅಧಿಕಾರಿ ಶ್ರೀ ಪ್ರಶಾಂತ ಪಾಟೀಲ್ ವಹಿಸಿಕೊಡಿದ್ದರು ಹಾಗೂ ಮುಖ್ಯ ಅತಿಥಿಗಳನ್ನಾಗಿ ಮಾಧ್ಯಮ ಮಿತ್ರರಾದ ಆರ್ ಟಿ ವಿ ಕನ್ನಡ, ಚಿನ್ನದ ನಾಡಿನ ಕನ್ನಡಿಗರ ಧ್ವನಿ ನಿರ್ದೇಶಕರಾದ ಶ್ರೀ ನಿವಾಸ ಮಧುಶ್ರೀ ರವರನ್ನ ಆಹ್ವಾನಿಸಿ ಕಾರ್ಯಕ್ರಮದಲ್ಲಿ ಅವರ ಮಾಧ್ಯಮ ರಂಗದ ಸೇವೆಯನ್ನ ಗುರುತಿಸಿ ಸನ್ಮಾನಿಸಲಾಯಿತು. ಹಾಗೂ ಪ್ರಚಾರ್ಯರು ಶ್ರೀ ಗುರುರಾಜ್ ಸತ್ಯಂಪೇಟ್ ˌ ಅತಿಥಿಗಳಾಗಿ ಶ್ರೀ ಮಂಜುನಾಥ್ ಎಸ್ ಬಿ ಪಬ್ಲಿಕ್ ಸ್ಕೂಲ್ , ಶ್ರೀ ರಾಯಪ್ಪ ಬಳಗಾನೂರ್ ದೈಹಿಕ ಶಿಕ್ಷಕರು ಆಗಮಿಸಿದ್ದರು ಅದೆ ರೀತಿಯಾ ಕಾಲೇಜಿನ ಉಪನ್ಯಾಸಕರಾದ ರಾಜ್ ಮಹಮ್ಮದ , ಸುಭಾಶ್ ˌ ಸುರೇಶ್ ˌರಾಧˌ ಯಾಸ್ಮೀನ್ ನಿಂಗಮ್ಮ ನಿಂಗರಾಜ್ ಉಪಸ್ಥಿತರಿದಂದ್ದರು. ಕಾಲೇಜಿನ ವಿದ್ಯಾರ್ಥಿನಿಯರು
ಉಡುಗೆ ತೊಡುಗೆಯಿಂದ ಶ್ರುಂಗಾರಗೊಂಡು ಹಬ್ಬದ ರೀತಿಯಲ್ಲಿ ಸಮಾರಂಭದಲ್ಲಿ ಭಾಗವಹಿಸಿˌ ತಮ್ಮ ಕಾಲೇಜಿನ ಮಧುರ ನೆನಪುಗಳನ್ನ ಮತ್ತು ಇಲ್ಲಿನ ಶಿಕ್ಷಣ ಗುರಿ ಸಾಧನೆ ಬಗ್ಗ ಹಾಗೂ ಶಿಕ್ಷಕಕರ ಜೋತೆಗಿನ ಸ್ನೇಹ ಸಂಬಂಧವನ್ನು ಮೇಲುಕು ಹಾಕುತ್ತ ತಮ್ಮ ಮನದಾಳ ನೆನಪಿನ ಬುತ್ತಿಯನ್ನು ಹಂಚಿಕೊಂಡರು. ನಂತರ ಪ್ರಥಮ ಪಿ ಯು ಸಿ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಫನ್ ಗಿಫ್ಟ್ ನೀಡುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಬೆರಗು ಮೂಡಿಸಿದರು


ನಂತರ ಅಧ್ಯಕ್ಷರು ಮಾತನಾಡಿ ವಿದ್ಯಾರ್ಥಿಗಳ ಜೀವನ ಪಾಸಾದರೆ ಪದವಿ ಫೇಲಾದರೆ ಮದುವೆ ವಿದ್ಯಾರ್ಥಿಗಳು ಯಾವುದೇ ಒಂದು ಕೆಟ್ಟ ಆಲೋಚನೆ ಬಗ್ಗೆ ಯೋಚನೆ ಮಾಡದೆ ಶಿಕ್ಷಣವನ್ನು ತೆಗೆದುಕೊಂಡು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳುವಂತ ಗುರಿ ನಿಮ್ಮದಾಗಬೇಕೆಂದು ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು ಈ ಬೀಳ್ಕೊಡುವ ಸಮಾರಂಭದಲ್ಲಿ ಒಳ್ಳೆ ವಿದ್ಯಾರ್ಥಿಗಳನ್ನು ಈ ಶಾಲೆ ಬೀಳ್ಕೊಡುತ್ತದೆ ಆದರೆ ಅವರಿಂದೆಂದಿಗೂ ಈ ಶಾಲೆಯಲ್ಲಿ ಕಲಿತ ವಿದ್ಯೆ ಮತ್ತು ಗುರುಗಳ ನೆನಪು ಅವರ ಜೀವನಕ್ಕೆ ದಾರಿಯಾಗುತ್ತದೆ ಎಂದು ಸುರೇಶ್ ಶಿಕ್ಷಕರು ಹೇಳಿದರು ಈ ಸಂದರ್ಭದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿಯರು ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಉಪಸಿತರಿದ್ದರು

WhatsApp Group Join Now
Telegram Group Join Now
Share This Article
error: Content is protected !!