ನಿಪ್ಪಾಣಿ : ನಿಪ್ಪಾಣಿ ತಾಲೂಕಿನ ಚಾಂದಶಿರದವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿ ಪಕ್ಷದ ಬಾಳಬಾಯಿ ಪೂಜಾರಿ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾದರು.ನಗರ ಹಾಗೂ ಗ್ರಾಮಾಂತರ ಯೋಜನೆ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಜಯಲಕ್ಷ್ಮಿ ಬಾಳೆಹೊಸೂರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಬಾಳಬಾಯಿ ಪೂಜಾರಿ ಯವರು ಅಧ್ಯಕ್ಷರಾದ ಕುರಿತು ಅಧಿಕೃತ ಘೋಷಣೆ ಆಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಅವರ ಅಭಿಮಾನಿಗಳು ಸಿಹಿ ಹಂಚಿ ಆನಂದಿಸಿದರು. ಚುನಾವಣೆಯಲ್ಲಿ ಬಾಳ ಬಾಯಿ ಪೂಜಾರಿಯವರ ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಬಾಪುಸಾಬ್ ಪಾಟೀಲರು ಬಾಳಬಾಯಿ ಅವರ ಹೆಸರನ್ನು ಸೂಚಿಸಿದರು. ಅದಕ್ಕೆ ಸರ್ವಾನುಮತದಿಂದ ಆಡಳಿತ ಮಂಡಳಿಯ ಎಲ್ಲ ಸದಸ್ಯರು ಅನುಮೋದನೆ ನೀಡಿದರು. ಈ ಸಂದರ್ಭದಲ್ಲಿ ಪಿಡಿಓ ನಾಗರಾಜ್ ಶಿಂದೆ ಮಾತನಾಡಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್ ಖೋತ ಜಯಶ್ರೀ ಪಾಟೀಲ್ ಶೀತಲ ಲಡಗೆ ಉಪಾಧ್ಯಕ್ಷ ವಿಜಯ ರೋಹಿದಾಸ ಅಣ್ಣ ಪಾಟೀಲ್ ಅಶೋಕ ಕುಮಾರ ಪಾಟೀಲ್ ಸಂಜಯ ಪಾಟೀಲ ನಾರಾಯಣ್ ನಾರಾಯಣ ಹಿರವೇ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು. ಬಿಜೆಪಿ ಕಾರ್ಯಕರ್ತರು ಉಪಸ್ಥಿತಿ ರಿದ್ದರು.
ವರದಿ : ಮಹಾವೀರ ಚಿಂಚನೆ