Join The Telegram | Join The WhatsApp |
ಬೆಳಗಾವಿ: ಗಡಿನಾಡಾದ ಬೆಳಗಾವಿಯಲ್ಲಿ ಲಕ್ಷಾಂತರ ಅಯ್ಯಪ್ಪ ಸ್ವಾಮಿಯ ಭಕ್ತರು ಇದ್ದು, ಪ್ರತಿ ವರ್ಷ ಇಲ್ಲಿ ವಿಶೇಷ ಪೂಜೆಗಳಾಗಿ, ಭಕ್ತರು ಸ್ವಾಮಿಯ ವೃತವನ್ನು ಮಾಡಿ, ಶಬರಿಮಲೆಗೆ ತೆರಳಿ ಸ್ವಾಮಿಯ ದರ್ಶನ ಪಡೆದು ಪುನೀತರಾಗುವರು.
ಅದೇ ಈ ವರ್ಷವೂ ಸಾವಿರಾರು ಭಕ್ತರು ಅಯ್ಯಪ್ಪ ಸ್ವಾಮಿಯ ಮಾಲೆ ಧರಿಸಿದ್ದು, ಈ ವರ್ಷ ಬೆಳಗಾವಿಯಲ್ಲಿ ಈ ಹಿಂದೆ ಯಾವತ್ತೂ ಆಗಿರದಂತ ಅಯ್ಯಪ್ಪ ಪೂಜೆ ಬ್ರಹತ್ ಪ್ರಮಾಣದಲ್ಲಿ ಜರಗುತ್ತಿದೆ.
ಈ ಮಹಾ ಪೂಜೆಯ ಸಕಲ ಜವಾಬ್ದಾರಿ ಹಾಗೂ ಉಸ್ತುವಾರಿಯನ್ನು ಬೆಳಗಾವಿಯ ಉತ್ತರ ಮತಕ್ಷೇತ್ರದ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾದ ಮೂರುಗೆಂದ್ರ ಪಾಟೀಲ ವಹಿಸಿಕೊಂಡಿದ್ದಾರೆ.
ಹಿಂದೆಂದೂ ಆಗಿರದಂತೆ ನಡೆಯುವ ಈ ಮಹಾ ಪೂಜೆಗೆ, ನಾಡಿನ ಮಹಾ ಪೀಠಾಧಿಪತಿಗಳು ದಿವ್ಯ ಸಾನಿಧ್ಯ ವಹಿಸಿಕೊಳ್ಳುವರು, ಅದೇರೀತಿ ನಾಡಿನ ಎಲ್ಲಾ ಪ್ರಮುಖ ಗುರುಸ್ವಾಮಿಗಳು ಆಗಮಿಸುವರು ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ವಿಶೇಷವಾಗಿ ನಡೆಯುವ ಈ ಅಯ್ಯಪ್ಪಸ್ವಾಮಿಯ ಮಹಾ ಪೂಜೆಗೆ ಬೆಳಗಾವಿಯ ಎಲ್ಲಾ ಕ್ಷೇತ್ರದ ಪ್ರಮುಖ ಗಣ್ಯರು, ಜನಪ್ರತಿನಿಧಿಗಳು, ಸಾವಿರಾರು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು, ಸಾರ್ವಜನಿಕರು ಭಾಗಿಯಾಗಿ ಬೆಳಗಾವಿಯ ಜನಮಾನಸದಲ್ಲಿ ಹಸಿರಾಗಿ ಉಳಿಯುವಂತೆ ಈ ಪೂಜೆಯನ್ನು ಮಾಡಲಾಗುವದು ಎಂದು ತಿಳಿದುಬಂದಿದೆ…
ವರದಿ : ಪ್ರಕಾಶ ಕುರಗುಂದ.
Join The Telegram | Join The WhatsApp |