This is the title of the web page
This is the title of the web page

Live Stream

September 2023
S M T W T F S
 12
3456789
10111213141516
17181920212223
24252627282930

| Latest Version 9.4.1 |

State News

ಮುರುಘಾಮಠದ ಶ್ರೀಗಳಾದ ಶಿವಮೂರ್ತಿ ಶರಣರ ಬಂಧನ, ನಿಷ್ಪಕ್ಷಪಾತ ತನಿಖೆಗೆ B,S,P(ಬಿ.ಎಸ್. ಪಿ) ಆಗ್ರಹ

Join The Telegram Join The WhatsApp

ಕರ್ನಾಟಕದ ಪ್ರಸಿದ್ಧ ಮತ್ತು ಪ್ರಭಾವಶಾಲಿ ಮಠಗಳಲ್ಲಿ ಒಂದಾಗಿರುವ ಶ್ರೀ ಮುರುಘಾಮಠದ ಶ್ರೀಗಳಾದ ಶಿವಮೂರ್ತಿ ಶರಣರು ತಮ್ಮ ಕ್ರಾಂತಿಕಾರಿ ವಿಚಾರಧಾರೆಯಿಂದ, ವೈಜ್ಞಾನಿಕ ಚಿಂತನೆಗಳಿಂದ ಮತ್ತು ಶೋಷಿತರ ಪರ ಕಾಳಜಿಯಿಂದಾಗಿ ನಾಡಿನಾದ್ಯಂತ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದಾರೆ. ಹೀಗಿರುವಾಗ ಶ್ರೀಗಳ ವಿರುದ್ದ ಕೇಳಿಬಂದಿರುವ ಇಂತಹ ಭೀಕರ ಆರೋಪದಿಂದ ಕನ್ನಡನಾಡು ಬೆಚ್ಚಿಬಿದ್ದಿದೆ.

ಶ್ರೀಗಳ ಮಠದ ಹಾಸ್ಟೆಲ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ ಗಂಭೀರ ಆರೋಪಕ್ಕೆ ಒಳಗಾಗಿರುವ ಶ್ರೀಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಾಗಿರುವುದು ಎಲ್ಲರಿಗೂ ತಿಳಿದಿದೆ. ಅಲ್ಲದೆ ಸಂತ್ರಸ್ಥ ವಿದ್ಯಾರ್ಥಿನಿಯರ ಪೈಕಿ ಒಬ್ಬ ಪರಿಶಿಷ್ಟಜಾತಿಯ ವಿದ್ಯಾರ್ಥಿನಿಯೂ ಇರುವುದರಿಂದಾಗಿ ಶ್ರೀಗಳ ವಿರುದ್ಧ ಎಸ್. ಸಿ. ಮತ್ತು ಎಸ್. ಟಿ. ದೌರ್ಜನ್ಯ ತಡೆ ಕಾಯ್ದೆ ಅನ್ವಯ ದೂರು ದಾಖಲಾಗಿದೆ.

ಈ ಎರಡು ಕಾಯ್ದೆಗಳಡಿ ಎಫ್ ಐ ಆರ್ ದಾಖಲಿಸಿದ ಕೂಡಲೇ ಆರೋಪಿಗಳನ್ನು ಬಂಧಿಸಬೇಕಾಗಿದ್ದ ಪೊಲೀಸರು ಒಂದು ವಾರ ವಿಳಂಬಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೂಲಕ ಒಂದು ಕೆಟ್ಟ ಪರಂಪರೆಗೆ ನಾಂದಿ ಹಾಡಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಸರ್ಕಾರ ತೋರಿದ ವಿಳಂಬ ಧೋರಣೆಯಿಂದಾಗಿ ತನಿಖೆಯು ನಿಷ್ಪಕ್ಷಪಾತವಾಗಿ ನಡೆಯುವ ಬಗ್ಗೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಬಹಳ ಅಘಾತಕಾರಿ ವಿಷಯವೇನೆಂದರೆ, ರಾಜ್ಯದ ಗೃಹ ಮಂತ್ರಿಗಳು ಶ್ರೀಗಳ ಪರ ವಕಾಲತ್ತು ವಹಿಸಿ ಶ್ರೀಗಳು ನಿರಪರಾಧಿ ಎಂಬಂತೆ ತನಿಖೆಯ ಪ್ರಾರಂಭ ಹಂತದಲ್ಲೇ ಹೇಳಿರುವುದು ತನಿಖೆಯನ್ನು ದಿಕ್ಕುತಪ್ಪಿಸುವ ಕ್ರಮವಾಗಿದೆ. ಇವರ ವರ್ತನೆಯು ಸಂವಿಧಾನಕ್ಕೆ ಎಸಗಿದ ಅಪಚಾರವಾಗಿದೆ. ಕಾನೂನಿನ ಮುಂದೆ ಎಲ್ಲರೂ ಸರಿ ಸಮಾನರು ಎಂದು ಹೇಳುತ್ತಲೇ ಕೆಲವರು ಕಾನೂನಿಗಿಂತ ಮಿಗಿಲಾದವರು ಎಂಬುವಂತಹ ಪಕ್ಷಪಾತ ಧೋರಣೆಯು ಇದಾಗಿದೆ. ಗೃಹ ಸಚಿವರ ಈ ವರ್ತನೆಯನ್ನು ಬಿ.ಎಸ್.ಪಿ. ಯು ಉಗ್ರವಾಗಿ ಖಂಡಿಸುತ್ತದೆ.

ಆದಕಾರಣ, ಆರೋಪಿಯು ಬಹಳ ಪ್ರಭಾವಶಾಲಿ ಆಗಿರುವುದರಿಂದಾಗಿ, ಅವರ ವಿರುದ್ಧ ದಾಖಲಾಗಿರುವ ಈ ಪ್ರಕರಣದ ವಿಚಾರಣೆಯನ್ನು ತಮಿಳುನಾಡು ಅಥವಾ ಕೇರಳ ರಾಜ್ಯಕ್ಕೆ ವರ್ಗಾಯಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ಅಲ್ಲದೆ ಸಂತ್ರಸ್ತರಿಗೆ ಸೂಕ್ತ ಭದ್ರತೆ ನೀಡಬೇಕೆಂದು ಬಹುಜನ ಸಮಾಜ ಪಾರ್ಟಿ ಆಗ್ರಹಿಸುತ್ತದೆ.ದಸ್ತಗೀರ ಮುಲ್ಲಾ
ವರದಿ: ಗಪೂರ, ಮುಜಾವರ


Join The Telegram Join The WhatsApp
Bharath Vaibhav
the authorBharath Vaibhav

Leave a Reply