ಬಾಗೇಪಲ್ಲಿ : ಬಾಬೆನಾಯಕನಹಳ್ಳಿ ಗ್ರಾಮದಲ್ಲಿ ಉಗ್ರಣಂಪಲ್ಲಿ ಗ್ರಾಮದ ಸರ್ವೆ ನಂಬರ್ 30 ನಲ್ಲಿ ಭೂ ಮಾಪನ ಇಲಾಖೆ ಅಧಿಕಾರಿಗಳ ಎಡವಟ್ಟಿನಿಂದ ಮೂವತ್ತಕ್ಕೂ ಹೆಚ್ಚು ಕುಟುಂಬಗಳು ಅತಂತ್ರದ ಸ್ಥಿತಿ ಎದುರಾಗಿದೆ.
ಬಿಳ್ಳೂರು ಗ್ರಾಂ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಾಬೆನಾಯಕನಹಳ್ಳಿ ಗ್ರಾಮದಲ್ಲಿ ಸರ್ವೆ ನಂಬರ್ 30 ರಲ್ಲಿ 6 ಎಕರೆ ಗೋಮಾಳ ಜಮೀನು ಇದ್ದು, ಅದರಲ್ಲಿ 2 ಎಕರೆ ಜಮೀನಿನಲ್ಲಿ ಗ್ರಾಮಸ್ಥರು ಮನೆಗಳನ್ನು ನಿರ್ಮಿಸಿಕೊಂಡಿದ್ದು ಸುಮಾರು 150 ಕುಟಂಬಗಳು 400 ಕ್ಕೂ ಹೆಚ್ಚು ಮತದಾರತಿರುವ ಗ್ರಾಮದಲ್ಲಿ ಸ್ಮಶಾನವಿಲ್ಲದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ.
ಇನ್ನೂ ಉಳಿದ , 2 ಎಕರೆ 29 ಕುಂಟೆ ಜಮೀನು ಸ್ಮಶಾನ ಭೂಮಿಗಾಗಿ ಮೀಸಲಿಟ್ಟಿದ್ದಾರೆ, ಉಳಿದ 1 ಎಕರೆ 20 ಕುಂಟೆ ಜಮೀನು ರಾಮಕೃಷ್ಣ ನಾಯಕ್ ಎಂಬುವರಿಗೆ ದರಕಾಸ್ತು ಆಗಿದೆ.
ಇದರಿಂದ ಗ್ರಾಮದ ಸುಮಾರು 40 ಕುಟುಂಬಗಳು ಅವರ ದರಕಾಸ್ತು ಜಮೀನಿಗೆ ಸೇರಿರುತ್ತವೆ ಎಂದು ಭೂ ಮಾಪನ ಇಲಾಖೆ ಅಧಿಕಾರಿಗಳು ನಕಾಶೆ ಮಾಡಿದ್ದು ಗ್ರಾಮಸ್ಥರಲ್ಲಿ ಆತಂಕ ಎದುರಾಗಿದೆ.
ಅಧಿಕಾರಿಗಳು ಖುದ್ದು ಸರ್ವೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಸ್ಥಳ ಗುರುತಿಸಿ ನಕಾಶೆಯನ್ನು ಗುರುತಿಸಿದ್ದು ಇದರಿಂದ ಗ್ರಾಮದಲ್ಲಿ ಜನತೆಗೆ ಆತಂಕ ಎದುರಾಗುವ ಸಾಧ್ಯತೆ ಕೂಡ ಇದೆ ಎಂದು ಸುರೇಶ್ ನಾಯ್ಕ ಎಂಬುವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನಾದರೂ ಜಿಲ್ಲಾ ಅಧಿಕಾರಿಗಳು ಹಾಗೂ ತಾಲೂಕು ತಹಸೀಲ್ದಾರ್ ರವರು ಜಮೀನು ಗುರುತಿಸಿ ಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸುರೇಶ್ ನಾಯ್ಕ.ಮಂಗೆ ನಾಯ್ಕ.ರಾಜು ಕೊಂಡ್ರೆ ನಾಯ್ಕ್.ಈಶ್ವರ್ ನಾಯ್ಕ್.ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ವರದಿ :ಯಾರಬ್. ಎಂ.