ಸಿಂಧನೂರು : ಫೆ,೧೪ ತಾಲೂಕಿನ ಕಲಮಂಗಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಗ್ರಾಮ ಪಂಚಾಯತಿ ವತಿಯಿಂದ ಅಸ್ಪೃಶ್ಯತೆ ನಿವಾರಣೆ ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಾಗಿದ್ದ ಕಲಮಂಗಿ ಗ್ರಾಮ ಪಂಚಾಯತಿ ಪಿಡಿಒ ಹುಚ್ಚಪ್ಪ ಗೈರಾಗಿ ಈ ಕಾರ್ಯಕ್ರಮಕ್ಕೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಮತ್ತು ಸ್ಥಳೀಯ ಸದಸ್ಯರಿಗೂ ಪಂಚಾಯತ ಸಿಬ್ಬಂದಿಗಳಿಗೆ ಇದರ ಬಗ್ಗೆ ಮಾಹಿತಿ ನೀಡದೆ ಪಂಚಾಯತಿಗೆ ಬೀಗ ಜಡೆದು ಕಾರ್ಯಕ್ರಮವನ್ನು ವಿಫಲ ಮಾಡುವ ಉದ್ದೇಶದಿಂದ ಹಾಗೂ ಸರ್ಕಾರದ ಆದೇಶವನ್ನು ಗಾಳಿಗೆ ತೂರುವ ಕೆಲಸ ಮಾಡಿದ್ದಾರೆ ಗ್ರಾಮ ಪಂಚಾಯತಿ ಪಿಡಿಒ ಇಲ್ಲದೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಿಜಯಲಕ್ಷ್ಮಿ ಮೇಡಂ ರವರು ನೇತೃತ್ವದಲ್ಲಿ ಅಸ್ಪೃಶ್ಯತೆ ಮತ್ತು ನಾಗರಿಕ ಹಕ್ಕುಗಳ ಸಂರಕ್ಷಣೆ ಕುರಿತು ಜಾಗೃತಿ ಕಾರ್ಯಕ್ರಮ ಜನಪದ ಸಂಸ್ಕೃತಿಕ ಕಲಾ ಸಂಸ್ಥೆ ವತಿಯಿಂದ ಕಲಮಂಗಿ ಬಸ್ ನಿಲ್ದಾಣದಲ್ಲಿ ಅಸ್ಪೃಶ್ಯತೆ ನಿರ್ವಹಣಾ ಅರಿವು ಮೂಡಿಸುವ ಕಾರ್ಯಕ್ರಮ ಜರಗಿಸಲಾಯಿತು .
ಆದ್ದರಿಂದ ಈ ಕಾರ್ಯಕ್ರಮಕ್ಕೆ ಉದ್ದೇಶ ಪೂರ್ವಕವಾಗಿ ಕಲಮಂಗಿ ಗ್ರಾಮ ಪಂಚಾಯತಿ ಪಿಡಿಓ ಹುಚ್ಚಪ್ಪ ಗೈರಾಗಿದ್ದು ಅವರನ್ನು ಕೂಡಲೇ ತಾಲೂಕು ಪಂಚಾಯತಿ ಈ ಓ. ಅವರು ಪಿಡಿಓ ಹುಚ್ಚಪ್ಪ ಅವರನ್ನು ಅಮಾನತ್ತು ಮಾಡಬೇಕೆಂದು ದಲಿತ ವಿದ್ಯಾರ್ಥಿ ಪರಿಷತ್ ಸಂಘಟನೆಯ ತಾಲೂಕ ಅಧ್ಯಕ್ಷ ದುರುಗೇಶ ಕಲ್ಮಂಗಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ, ಪದಾಧಿಕಾರಿಗಳಾದ – ಶರಣಬಸವ ಸಂಕನೂರು, ಮರಿಸ್ವಾಮಿ, ನಿರುಪಾದಿ, ಪ್ರವೀಣ್ ಕುಮಾರ್, ಶ್ಯಾಮೂರ್ತಿ, ಇದ್ದರು.
ವರದಿ:ಬಸವರಾಜ ಬುಕ್ಕನಹಟ್ಟಿ