Ad imageAd image

ಅನ್ಯಾಯವಾಗುತ್ತಿದೆ ಎಂದು ರೊಚ್ಚಿಗೆದ್ದ ‘ಎಣ್ಣೆ ಪ್ರಿಯರು’! ರಾತ್ರೋರಾತ್ರಿ ವೈನ್ ಶಾಪ್ ಮುಂದೆ ಹೈಡ್ರಾಮ

Bharath Vaibhav
ಅನ್ಯಾಯವಾಗುತ್ತಿದೆ ಎಂದು ರೊಚ್ಚಿಗೆದ್ದ ‘ಎಣ್ಣೆ ಪ್ರಿಯರು’! ರಾತ್ರೋರಾತ್ರಿ ವೈನ್ ಶಾಪ್ ಮುಂದೆ ಹೈಡ್ರಾಮ
WhatsApp Group Join Now
Telegram Group Join Now
ಚಾಮರಾಜನಗರ: ಯಾವುದೋ ಅಕ್ರಮಕ್ಕಾಗಿ ಸಂಘಟನೆಗಳು, ಸಂಸ್ಥೆಗಳು ಅನ್ಯಾಯವಾದಾಗ ಪ್ರತಿಭಟನೆ ಮಾಡೋದು ಸಾಮಾನ್ಯ ಆದ್ರೆ ಇನ್ನೊಂದು ಕಡೆ ಎಣ್ಣೆ ಪ್ರಿಯರು ರಾತ್ರೋ ರಾತ್ರಿ ಪ್ರತಿಭಟನೆಗೆ ಇಳಿದಿದ್ದಾರೆ ನೋಡಿ. ಈ ಹಿಂದೆ ಊರಲ್ಲೊಂದು ಬಾರ್ ಬೇಕು, ಮದ್ಯಪ್ರಿಯರಿಗೆ ಸರ್ಕಾರ ಸೌಲಭ್ಯಗಳನ್ನು ಒದಗಿಸಬೇಕು ಹೀಗೆಲ್ಲಾ ಪ್ರತಿಭಟನೆ ಮಾಡಿರೋದನ್ನ ನೋಡಿರುತ್ತೇವೆ.
ಆದ್ರೆ ಇಲ್ಲೊಂದು ಕಡೆ ಎಣ್ಣೆ ಪ್ರಿಯರಿಗೆ ಅನ್ಯಾವಾಗುತ್ತಿದೆಯಂತೆ. ಇದಕ್ಕಾಗಿ ಮದ್ಯಪ್ರಿಯರು ಪ್ರತಿಭಟನೆ ನಡೆಸಿದ್ದಾರೆ.
ವೈನ್ ಶಾಪ್ ಎದುರು ಎಣ್ಣೆ ಪ್ರಿಯರ ಹೈಡ್ರಾಮ! ಎಂಆರ್‌ಪಿ ವೈನ್‌ಸ್ಟೈರ್‌ನಲ್ಲಿ ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಮಾಡ್ತಿದ್ದಾರೆ ಎಂದು ಆಕ್ರೋಶಗೊಂಡ ಮದ್ಯಪ್ರಿಯರು, ರೊಚ್ಚಿಗೆದ್ದು ಪ್ರೊಟೆಸ್ಟ್ ಆರಂಭಿಸಿದ್ದಾರೆ. ಕೈಯಲ್ಲಿ ಬಾಟಲಿ ಹಾಗೂ ಬಿಲ್ ಹಿಡಿದು ವೈನ್ಸ್ ಸ್ಕೋರ್ ಮಾಲೀಕರಿಗೆ ಹಿಗ್ಗಾ ಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಚಾಮರಾಜನಗರ ಜಿಲ್ಲೆ ಯಳಂದೂರು ಪಟ್ಟಣದಲ್ಲಿ ವೈನ್‌ಶಾಪ್ ಎದುರು ಮದ್ಯ ಪ್ರಿಯರು ಲೇಟ್ ನೈಟ್ ಹೈ ಡ್ರಾಮ ಶುರು ಮಾಡಿದ್ದಾರೆ. ಈ ವೇಳೆ ಮದ್ಯ ಪ್ರಿಯರ ಕಡು ಕೋಪಕ್ಕೆ ಮೈನ್ಸ್ ಸ್ಕೋರ್ ಮಾಲೀಕರು ಬಳಲಿ ಬೆಂಡಾಗಿದ್ದಾರೆ ಎನ್ನಲಾಗಿದೆ. ಎಣ್ಣೆ ಪ್ರಿಯರ ಆವಾಜ್‌ಗೆನಿಂದ ರಕ್ಷಣೆಗೆ ತಕ್ಷಣ ವೈನ್ ಶಾಪ್ ಮಾಲೀಕರು ಪೊಲೀಸರು ಮೊರೆ ಹೋಗಿದ್ದು, ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮದ್ಯ ಪ್ರಿಯರ ಮನವೊಲಿಕೆ ಮಾಡಿದ್ದಾರೆ.
WhatsApp Group Join Now
Telegram Group Join Now
Share This Article
error: Content is protected !!