Join The Telegram | Join The WhatsApp |
ವಿಜಯನಗರ : ಜಿಲ್ಲೆ ಕೂಡ್ಲಿಗಿ, ತಾಲೂಕಿನ ಮೊರಬ ಗ್ರಾಮ ಪಂಚಾಯ್ತಿ ಕೇಂದ್ರ ಸ್ಥಾನವಾದ. ಮೊರಬ ಗ್ರಾಮದಲ್ಲಿ ಡಿ15ರಂದು, ಶ್ರೀಸಣ್ಣ ವೀರಭದ್ರೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಸಮುದಾಯ ಬವನದಲ್ಲಿ. ಗ್ರಂಥಾಲಯವನ್ನು ಪುನರಾರಂಭ ಮಾಡಲಾಯಿತು. ಗ್ರಾಮದಲ್ಲಿ ಬಹು ವರ್ಷಗಳಿಂದ ಸಾರ್ವಜನಿಕ ಗ್ರಂಥಾಲಯ ಇತ್ತು, ಆದರೆ ಆ ಕಟ್ಟಡ ತುಂಬಾ ಕಿರಿದಾಗಿತ್ತು ಮತ್ತು ಅವ್ಯವಸ್ಥೆಯ ಆಗರವಾಗಿತ್ತು. ಕೆಲ ಸಂಘಟನೆಗಳ ಒತ್ತಾಯದ ಮೇರೆಗೆ ಹಾಗೂ ಗ್ರಂಥಾಲಯದ ಇಲಾಖೆಯ ಉನ್ನತಾಧಿಕಾರಿಗಳ ಸೂಚನೆಯಂತೆ. ಹಳೇ ಕಟ್ಟಡದಲ್ಲಿದ್ದ ಗ್ರಂಥಾಲಯವನ್ನು, ಸುವ್ಯವಸ್ಥಿತ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಮೆಹಬೂಬ್ ಭಾಷಾ, ಉಪಾಧ್ಯಕ್ಷರಾದ ಶ್ರೀಮತಿದುರ್ಗಮ್ಮ ವೆಂಕಟೇಶ, ಹೋರಾಟಗಾರ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯ ಮೊರಬನಹಳ್ಳಿ ಕರಿಯಪ್ಪ ಸೇರಿದಂತೆ ಬಹುತೇಕ ಸದಸ್ಯರು, ಪಿಡಿಒ ಶರಣಪ್ಪ, ಸಿಬ್ಬಂದಿಗಳಾದ ದಿನೇಶ್, ವೀರೇಶ್, ಉಮೇಶ್ , ಗ್ರಂಥಪಾಲಕರಾದ ಜಗದೀಶ್ ಗೌಡ, ಗ್ರಂಥಾಲಯದ ಓದುಗರು, ಮೊರಬ ಗ್ರಾಮಸ್ಥರು, ಹಾಗೂ ನೆರೆಯ ಹೊರೆಯ ಗ್ರಾಮಗಳ ಗ್ರಾಮಸ್ಥರಿದ್ದರು.
ವಿ.ಜಿ.ವೃಷಭೇಂದ್ರ
Join The Telegram | Join The WhatsApp |