Join The Telegram | Join The WhatsApp |
ಬೆಂಗಳೂರು: ರಾಜ್ಯ ಸರ್ಕಾರದಿಂದ ವಿವಿಧ ಉದ್ದಿಮೆಗಳಲ್ಲಿ ದುಡಿಯುತ್ತಿರುವಂತ ಕಾರ್ಮಿಕರಿಗೆ ಗೌರಿ-ಗಣೇಶ ಹಬ್ಬದ ಬಂಫರ್ ಗಿಫ್ಟ್ ಎನ್ನುವಂತೆ ಶೀಘ್ರದಲ್ಲೇ ಕನಿಷ್ಠ ವೇತನ ಪರಿಷ್ಕಕರಣೆಗೆ ತೀರ್ಮಾನ ಕೈಗೊಳ್ಳಲಿದೆ. ಅದರಂತೆ 31,000 ಕನಿಷ್ಠ ವೇತನ ಜಾರಿಗೊಳಿಸೋ ಮೂಲಕ, ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿಗೊಳಿಸಿ, ಸರ್ಕಾರ ಗಣೇಶ ಹಬ್ಬಕ್ಕೆ ಗಿಫ್ಟ್ ನೀಡಲಿದೆ.
ರಾಜ್ಯದಲ್ಲಿ 70 ವಲಯಗಳಲ್ಲಿ ಕಾರ್ಮಿಕರು ದುಡಿಯುತ್ತಿದ್ದು, ಅವರಿಗೆ ಕನಿಷ್ಠ ವೇತನ ಕೂಡ ಸಿಗುತ್ತಿಲ್ಲ. ಕನಿಷ್ಠ ವೇತನ ಜಾರಿಗೊಳಿಸಬೇಕು ಎಂಬುದು ಹಲವು ದಿನಗಳ ಬೇಡಿಕೆಯಾಗಿತ್ತು. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಇದೇ ವಾರದಲ್ಲಿ ಕನಿಷ್ಠ ವೇತನ ಜಾರಿಗೆ ಸಂಬಂಧ ಮಂಡಳಿಯನ್ನು ರಚನೆ ಮಾಡಿ, ಕ್ರಮವಹಿಸೋದಕ್ಕೆ ಮುಂದಾಗಿದೆ.
ಅಂದಹಾಗೇ ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ 2017ರ ನಂತ್ರ ನಡೆದಿರೋದಿಲ್ಲ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ವೇತನ ಪರಿಷ್ಕರಮೆಗೆ ಕ್ರಮ ಕೈಗೊಳ್ಳಲಾಗಿತ್ತು. ಆಗ ಶೇ.10ರಷ್ಟು ಮಾತ್ರವೇ ವೇತನ ಪರಿಷ್ಕರಣೆ ಮಾಡಲಾಗಿತ್ತು. ಆದರೇ ಇದಕ್ಕೆ ಕಾರ್ಮಿಕ ಸಂಘಟನೆಗಳು ಒಪ್ಪದೇ, ಕೋರ್ಟ್ ಮೆಟ್ಟಿಲೇರಿ, ಅದಕ್ಕೆ ತಡೆ ಕೂಡ ತರಲಾಗಿತ್ತು.
ಇದೀಗ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕನಿಷ್ಠ ವೇತನವನ್ನು ಕಾರ್ಮಿಕರಿಗೆ 31,000 ರೂ.ಗಳಿಗೆ ನಿಗದಿ ಪಡಿಸೋದಾಗಿ ಹೇಳಿದ್ದಾರೆ. ಅದರಂತೆ ಕನಿಷ್ಠ ವೇತನ ನಿಗದಿ ಸಂಬಂಧ ಮಂಡಳಿಯನ್ನು ರಚಿಸಿ, ಪರಿಷ್ಕರಣೆಗೆ ಕ್ರಮವಹಿಸೋದಾಗಿ ತಿಳಿಸಿದ್ದಾರೆ. ಇದರಂತೆ ಕನಿಷ್ಠ ವೇತನ ಕಾರ್ಮಿಕರಿಗೆ ಜಾರಿಯಾಗಿದ್ದೇ ಆದಲ್ಲಿ, ರಾಜ್ಯದಲ್ಲಿನ ಸುಮಾರು 1.30 ಕೋಟಿ ಕಾರ್ಮಿಕರಿಗೆ ಸರ್ಕಾರದಿಂದ ಗೌರಿ-ಗಣೇಶ ಹಬ್ಬದ ಬಂಫರ್ ಗಿಫ್ಟ್ ಸಿಕ್ಕಂತೆ ಆಗಲಿದೆ.
Join The Telegram | Join The WhatsApp |