ಹುಮನಾಬಾದ:- ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಯಾರಿಂದಾದರೂ ಶಾಪ ತಟ್ಟುತ್ತೆ ಅಂದರೆ ಅದು ರೈತರಿಂದ ಶಾಪ ತಟ್ಟುತ್ತೆ ಎಂದು ಬೀದರನ ಸಂಸದರು,ಕೇಂದ್ರ ಸಚಿವರಾದ ಭಗವಂತ ಖುಬಾ ಹೇಳಿದ್ದಾರೆ.
ಬೀದರ್ನಿಂದ ಯಶವಂತಪುರಕ್ಕೆ ಹುಮನಾಬಾದ ಮಾರ್ಗವಾಗಿ ತೆರಳುವ ರೈಲಿಗೆ ಭಾನುವಾರ ಸಂಜೆ ಹುಮನಾಬಾದ್ ಪಟ್ಟಣದ ಹೊರವಲಯದ ರೈಲ್ವೆ ನಿಲ್ದಾಣದಲ್ಲಿ ಚಾಲನೆ ನೀಡಿ ಮಾತನಾಡಿದ್ದು,ರೈತರಿಗೆ ಸಮರ್ಪಕವಾದ ವಿದ್ಯುತ್ ನೀಡಲು ಕಾಂಗ್ರೆಸ್ ಸರ್ಕಾರಕ್ಕೆ ಯೋಗ್ಯತೆ ಇಲ್ಲ,ರೈತರು ಗೋಳಾಡುತ್ತಾ ಕಣ್ಣೀರು ಹಾಕುತ್ತಿದ್ದಾರೆ
ಈ ಸರ್ಕಾರಕ್ಕೆ ರೈತರ ಶಾಪ ತಟ್ಟೆ ತಟ್ಟುತ್ತೆ. 2014ರಿಂದ 9 ವರ್ಷಗಳ ಕಾಲ ಕ್ಷೇತ್ರದಲ್ಲಿ ಹೈವೆ ರಸ್ತೆ, ರೈಲ್ವೆ,ವಿಮಾನ ಸೌಲಭ್ಯ ಸೇರಿ ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ.ಭಾಲ್ಕಿಯಲ್ಲಿ 60,ಹುಮನಾಬಾದನಲ್ಲಿ 40 ವರ್ಷಗಳಿಂದ ರಾಜಕೀಯ ಮಾಡುತ್ತಿದ್ದಾರೆ.
ರೋಡ್ ಮಾಡಿಕೊಳ್ಳಲು ಆಗಿಲ್ಲ,ಇವಾಗ ರೋಡ್ ನಾನು ಮಾಡಿಸಿದ್ದೇನೆ ಎಂದು ಹೇಳಿದರು.ಹುಮನಾಬಾದ ಶಾಸಕ ಸಿದ್ದು ಪಾಟೀಲ್ ಮಾತಾಡಿ,ವಿವಿಧ ಕೆಲಸ ಕಾರ್ಯಗಳಿಗಾಗಿ ಕ್ಷೇತ್ರದ ಜನರು ಹೆಚ್ಚಾಗಿ ಹೈದರಾಬಾದ್ ನಗರಕ್ಕೆ ಹೋಗುತ್ತಾರೆ. ಹಾಗಾಗಿ,ಬೀದರ್-ಹೈದರಾಬಾದ್ ರೈಲು ಹುಮನಾಬಾದ್ ಮಾರ್ಗವಾಗಿ ಹೋದರೆ ಈ ಭಾಗದ ಜನರಿಗೆ ಮತ್ತಷ್ಟು ಅನುಕೂಲ ಆಗಲಿದೆ, ಆದಷ್ಟು ಬೇಗ ಈ ಒಂದು ಕೆಲಸ ಮಾಡಬೇಕು ಎಂದು ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಮನವಿ ಮಾಡಿದರು.
ವರದಿ:ಸಜೀಶ ಲಂಬುನೋರ್