Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕುಂಬಾರ ಗುರುಪೀಠದಲ್ಲಿ ಜಟಾಪಟಿ ಸ್ವಾಮೀಜಿ ಪರ ವಿರುದ್ಧ ಗುಂಪುಗಳ ಮುಖಂಡರ ವಾಗ್ವಾದ

Advertisement

ಐಗಳಿ :ತೆಲಸಂಗ ಕುಂಬಾರ ಗುರುಪೀಠದಲ್ಲಿ ಜಟಾಪಟಿ ಸ್ವಾಮೀಜಿ ಪರ ವಿರುದ್ಧ ಗುಂಪುಗಳ ಮುಖಂಡರ ನಡುವೆ ವಾಗ್ವಾದ, ಪೊಲೀಸರ ಮಧ್ಯಪ್ರವೇಶ
ಇತ್ತೀಚೆಗಷ್ಟೇ ನಡೆದ ಪಂಚಮಸಾಲಿ ಸಮಾಜದ ಗುರುಪೀಠದ ಟ್ರಸ್ಟ್ ವಿವಾದದ ಬೆನ್ನಲ್ಲೇ, ಇದೀಗ ರಾಜ್ಯದ ಪ್ರಥಮ ಕುಂಬಾರ ಸಮಾಜದ ಗುರುಪೀಠದಲ್ಲೂ ಭಿನ್ನಮತ ಸ್ಫೋಟಗೊಂಡಿದೆ.

 ಟ್ರಸ್ಟ್ ವಿಚಾರವಾಗಿ ಸಮಾಜದ ಮುಖಂಡರು ಎರಡು ಗುಂಪುಗಳಾಗಿ ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದರಿಂದ, ಅಥಣಿ ತಾಲೂಕಿನ ತೆಲಸಂಗ ಗ್ರಾಮದ ಕುಂಬಾರ ಗುರುಪೀಠದಲ್ಲಿ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಐಗಳಿ ಪೊಲೀಸರು ಮಧ್ಯಪ್ರವೇಶದಿಂದ ಸದ್ಯಕ್ಕೆ ಪರಿಸ್ಥಿತಿ ತಿಳಿಯಾಗಿದೆ.
ತೆಲಸಂಗ ಗ್ರಾಮದ ಕುಂಬಾರ ಗುರುಪೀಠದ ಶ್ರೀಮಠದಲ್ಲಿ ಮೇ ೨೪ರಂದು ನೂತನ ಕಲ್ಯಾಣ ಮಂಟಪದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಕುಂಬಾರ ಸಮುದಾಯದ ಒಂದು ಗುಂಪು ಇಂದು ಸಭೆ ಸೇರಿ ಪತ್ರಿಕಾಗೋಷ್ಠಿಗೆ ಸಜ್ಜಾಗಿತ್ತು. ಮೇ ೨೪ರ ಕಲ್ಯಾಣ ಮಂಟಪ ಉದ್ಘಾಟನಾ ಕಾರ್ಯಕ್ರಮವನ್ನು ಸಮಾಜದ ಎಲ್ಲರಿಗೂ ತಿಳಿಸದೇ ಏಕಪಕ್ಷೀಯವಾಗಿ ಹಮ್ಮಿಕೊಳ್ಳಲಾಗಿದೆ. ಮಠದ ಆಡಳಿತಕ್ಕಾಗಿ ಎಷ್ಟು ಬಾರಿ ಒತ್ತಾಯಿಸಿದರೂ ಸಮಿತಿ (ಕಮಿಟಿ) ರಚನೆ ಮಾಡುತ್ತಿಲ್ಲ. ಶ್ರೀಮಠದ ಉತ್ತರಾಧಿಕಾರಿಯು ಕಡ್ಡಾಯವಾಗಿ ಕುಂಬಾರ ಸಮಾಜಕ್ಕೆ ಸೇರಿದವರೇ ಆಗಿರಬೇಕು ಎಂಬ ನಿಯಮವನ್ನು ಮಠದ ಬೈಲಾದಲ್ಲಿ (ನಿಯಮಾವಳಿ) ಸೇರಿಸಬೇಕು.
news_1779254714_0_162.webp

 

ಪೂಜ್ಯ ಬಸವ ಗುಂಡಯ್ಯ ಸ್ವಾಮೀಜಿಯವರು ಮಹತ್ವದ ಭರವಸೆಯೊಂದನ್ನು ನೀಡಿದರು. ಮೇ ೨೪ರಂದು ನಡೆಯಲಿರುವ ಕಲ್ಯಾಣ ಮಂಟಪದ ಉದ್ಘಾಟನಾ ಸಮಾರಂಭ ಮುಗಿದ ತಕ್ಷಣವೇ ಶ್ರೀಮಠಕ್ಕೆ ನೂತನ ಕಮಿಟಿ ರಚನೆ ಮಾಡಲಾಗುವುದು. ಅಲ್ಲದೆ, ಕುಂಬಾರ ಸಮಾಜದವರನ್ನೇ ಮಠದ ಉತ್ತರಾಧಿಕಾರಿಯನ್ನಾಗಿ ಸ್ವೀಕರಿಸಲಾಗುವುದು ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು.

 ಸ್ವಾಮೀಜಿಯವರ ಈ ನಿರ್ಧಾರಕ್ಕೆ ಭಿನ್ನಮತ ಹೊಂದಿದ್ದ ಇನ್ನೊಂದು ಗುಂಪು ಸಮ್ಮತಿ ಸೂಚಿಸಿದ್ದರಿಂದ ಸದ್ಯಕ್ಕೆ ವಿವಾದ ಸುಖಾಂತ್ಯಗೊಂಡಂತಾಗಿದೆ. 

ಆದಾಗ್ಯೂ, ಮೇ ೨೪ರ ಕಾರ್ಯಕ್ರಮದ ನಂತರದ ಬೆಳವಣಿಗೆಗಳ ಮೇಲೆ ಸಮಾಜದ ಬಾಂಧವರು ಕಣ್ಣಿಟ್ಟಿದ್ದು, ಚಿಕ್ಕ ಸಮುದಾಯ. ರಾಜ್ಯದಲ್ಲಿರುವುದು ಕುಂಬಾರ ಗುರಪೀಠ ಒಂದೇ ಆಗಿದ್ದು ನಮ್ಮನಮ್ಮಲ್ಲಿಯೇ ಕಚ್ಚಾಟ ಬೇಡ ಎಂಬ ಮುಖಂಡರ ಅಭಿಪ್ರಾಯಕ್ಕೆ ಸಮ್ಮತಿಸಿ ಸಭೆ ಶಾಂತಗೊಂಡಿತು.
ಸಮಾಜದ ಮುಖಂಡರಾದ ನಿವೃತ್ತ ಡಿವಾಯ್‌ಎಸ್‌ಪಿ ಸೋಮಲಿಂಗ, ಬಿ.ಜಿ.ನಾಗೂರ, ಬಸವರಾಜ ಕುಂಬಾರ, ಗುರುರಾಜ ಕುಂಬಾರ, ಜಡೆಪ್ಪಾ ಕುಂಬಾರ, ಸದಾನಂದ ಕುಂಬಾರ, ರಮೇಶ ಕುಂಬಾರ, ಮಲ್ಲಿಕಾರ್ಜುನ ಕುಂಬಾರ, ದರ.ಶಶಿಧರ ಕುಂಬಾರ, ಡಾ.ಎಸ್.ಪಿ.ಕುಂಬಾರ, ಸಿ.ಜಿ.ಕುಂಬಾರ ಸೇರಿದಂತೆ ಅಕೇಕರು ಐಗಳಿ ಪೊಲೀಸ್ ಠಾಣೆ ಪಿಎಸ್ಐ ಚಂದ್ರಶೇಖರ ಸಾಗನೂರ  ಹಾಗೂ ಸಿಬ್ಬಂದಿಗಳು ಬಂಧೂಬಸ್ತ ಕೈಗೊಂಡಿದ್ದರು.

ವರದಿ:ಆಕಾಶ ಮಾದರ

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಶ್ವಕಪ್ ಫುಟ್‌ಬಾಲ್: ಕೊಲಂಬಿಯಾಗೆ ೩-೧ ರ ಜಯದೆಹಲಿಯಲ್ಲೂ ದೋಸೆಯ ಘಮ, ಘಮ15 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಎಫ್ ಡಿಎ ಗ್ಲೇನ್ ಫಿಲಿಪ್ಸ್ ಶತಕ: ಕಿವೀಸ್ ಉತ್ತಮ ಮೊತ್ತಮುಖ್ಯಮಂತ್ರಿಯಾದ ಬಳಿಕ ಮೊದಲ ಟಾಸ್ಕ್ ನಲ್ಲೇ ಗೆದ್ದು ಬೀಗಿದ ಡಿ.ಕೆ.ಶಿವಕುಮಾರ್ ಮತದಾನ ಹಕ್ಕು ಇದ್ದವರಿಗೆ ಮಾತ್ರ ಗ್ಯಾರಂಟಿ ಯೋಜನೆಗಳು : ಡಿ.ಕೆ.ಶಿವಕುಮಾರ್60ನೇ ವಯಸ್ಸಿನಲ್ಲಿ ಪೇಸ್ ಬುಕ್ ಲವ್ : 80 ವರ್ಷದ ವರನ ವರಿಸಿದ ಹಿರಿಯ ನಟಿ ಸ್ಯಾಂಡ್ ಮಾಫಿಯಾ : ಬಿಜೆಪಿ ಮುಖಂಡ ಸೇರಿ ಮೂವರನ್ನು ಕಾರಿನಲ್ಲೇ ಸುಟ್ಟ ಕಿರಾತಕರುವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಐದೂ ಅಭ್ಯರ್ಥಿಗಳು ಗೆಲುವು ಪಕ್ಕಾ : ಲಕ್ಷ್ಮೀ ಹೆಬ್ಬಾಳ್ಕರ್ಸದ್ಯಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಕಡಿಮೆಯಾಗುವುದಿಲ್ಲ : ಕೇಂದ್ರ ಸರ್ಕಾರ ಸ್ಪಷ್ಟನೆ