ಇಳಕಲ್ಲ : ನಗರದಲ್ಲಿ ಸದಾ ಬಂದಿಲ್ಲ ಒಂದು ಸಮಾಜ ಸೇವೆ ಮಾಡುತ್ತಿರುವ ದೀಪು ದೀಕ್ಷಾ ಕ್ರೀಡಾ ಮತ್ತು ಸಾಂಸ್ಕೃತಿಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಯುವ ಮುಖಂಡರು ಸಮಾಜಸೇವಕರು ಅಶೋಕ ಸಂಗಪ್ಪ ಚಲವಾದಿ ಇವರ 40ನೇ ಜನ್ಮದಿನದ ಪ್ರಯುಕ್ತ ಸಂಸ್ಥೆಯ ವತಿಯಿಂದ ನಗರದ ಗುರುಲಿಂಗಪ್ಪ ಬಡಾವಣೆಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಾಗೂ ಜನ್ಮದಿನದ ಪ್ರಯುಕ್ತ ಸಸಿ ನೆಡಲಾಯಿತು ನಂತರ ಮಕ್ಕಳಿಗೆ ನೋಟ್ ಪುಸ್ತಕ ಪೆನ್ನು ವಿತರಿಸಿದರು ಹಾಗೂ ನಂದವಾಡಗಿ ಎಬಿಟಿ ಗುರುಕುಲ ಶಾಲೆ ಮಕ್ಕಳಿಗೆ ನೋಟ್ ಬುಕ್ ಹಾಗೂ ಪೆನ್ನು ವಿತರಿಸಿದರು ನಗರದಲ್ಲಿನ ವೃದ್ರಾಶ್ರಮಗಳಾದ ಅಮ್ಮ ಸೇವಾ ಸಂಸ್ಥೆ, ಸುರಕ್ಷಾ ಸೇವಾ ಸಂಸ್ಥೆ, ನವ ಜೀವನ ವೃದ್ಧಾಶ್ರಮದಲ್ಲಿ ಆಶ್ರಮ ನಿವಾಸಿಗಳಿಗೆ ದಿನಸಿ ಕಿಟ್, ಹಣ್ಣು ಹಂಪಲುಗಳನ್ನ ವಿತರಣೆ ಮಾಡಿದರು.




ಇದೇ ಸಂದರ್ಭದಲ್ಲಿ ಅಶೋಕ್ ಚಲವಾದಿಯವರ ಧರ್ಮಪತ್ನಿ ಸವಿತಾ ಅಶೋಕ್ ಚಲವಾದಿ ಹಾಗೂ ಶ್ಯಾಮ್ ಮುಧೋಳ್, ಶ್ರೀನಿವಾಸ್ ಬಡಿಗೇರ್, ಬಸವರಾಜ್ ಪಾಚಾಪುರ್, ಮಹಾಂತೇಶ್ ಚಲವಾದಿ, ಆಕಾಶ್ ಚಲವಾದಿ, ರಾಜು ಚಲವಾದಿ, ರಾಜು ಪತ್ತಾರ್, ಶೇಖರ್ ಚಿನಿವಾಲರ್, ಮಂಜುನಾಥ್ ಅಮರಾವತಿ, ಮಂಜುನಾಥ್ ಗೋನಾಳ್, ಗುಂಡು ನೂರoದಯ್ಯ, ಅಕ್ಷಯ್, ದೀಪು ದೀಕ್ಷಾ ಕ್ರೀಡಾ ಮತ್ತು ಸಂಸ್ಕೃತಿಕ ಶಿಕ್ಷಣ ಸಂಸ್ಥೆಯ ಸರ್ವ ಸದಸ್ಯರು ಇತರರು ಇದ್ದರು.
ವರದಿ : ಶಿವಕುಮಾರ ಕೆಂಭಾವಿಹಿರೇಮಠ


