ಬಾಗೇಪಲ್ಲಿ :ಪಟ್ಟಣ ರಾಘವೇಂದ್ರ ಸ್ವಾಮಿಗಳ ಮಠದ ಆವರಣದಲ್ಲಿ 1.5 ಕೋಟಿ ವೆಚ್ಚದಲ್ಲಿ ಕಲ್ಯಾಣ ಮಂಟಪಕ್ಕೆ ಭೂಮಿ ಪೂಜೆ,: ಟ್ರಸ್ಟ್ ಅಧ್ಯಕ್ಷ ಎಚ್.ಚಿತ್ತರಂಜನ್ ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಆವರಣದಲ್ಲಿ ಸುಮಾರು ಒಂದೂವರೆ ಕೋಟಿ ವೆಚ್ಚದಲ್ಲಿ ನೂತನ ಕಲ್ಯಾಣ ಮಂಟಪ ಕಟ್ಟಡದ ಭೂಮಿ ಪೂಜೆ ಕಾರ್ಯಕ್ರಮವನ್ನು ಬಾಗೇಪಲ್ಲಿ ಗಡಿದಂ ಕ್ಷೇತ್ರದ ವೇದ ವಿದ್ವಾನ್ ಶ್ರೀ ವೇಣುಗೋಪಾಲಾಚಾರ್ಯ ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆಯಲ್ಲಿ ಶ್ರೀ ರಾಘವೇಂದ್ರ ಟ್ರಸ್ಟ್ ಅಧ್ಯಕ್ಷ ಎಚ್.ಚಿತ್ತರಂಜನ್ ರವರು ಮಾತನಾಡಿ, ಕಲ್ಯಾಣ ಮಂಟಪದ ನಿರ್ಮಾಣಕ್ಕಾಗಿ ಸುಮಾರು 1.5 ಕೋಟಿ ರೂ ಗಳ ಅಂದಾಜು ವೆಚ್ಚ ನೀಲನಕ್ಷೆ ಸಿದ್ದಪಡಿಸಲಾಗಿದೆ. ರಾಘವೇಂದ್ರ ಸ್ವಾಮಿಗಳ ಭಕ್ತರು, ಸಾರ್ವಜನಿಕರು ಕಲ್ಯಾಣ ಮಂಟಪದ ನಿರ್ಮಾಣಕ್ಕೆ ಉಧಾರವಾಗಿ ಸಹಾಯಧನ ನೀಡಬೇಕು, ಕಲ್ಯಾಣ ಮಂಟಪ ನಿರ್ಮಾಣವಾದರೇ ಸಾರ್ವಜನಿಕರ ಮದುವೆ, ಧಾರ್ಮಿಕ ಕಾರ್ಯಕ್ರಮ ಹಾಗೂ ಸಮಾಜಿಕ ಕಾರ್ಯಕ್ರಮ ನಡೆಸಲು ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಬಾಗೇಪಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಆರ್.ನರಸಿಂಹನಾಯ್ಡು, ಪುರಸಭೆಯ ಮಾಜಿ ಉಪಾಧ್ಯಕ್ಷೆ ಶ್ರೀಮತಿ ಸುಜಾತನರಸಿಂಹ ನಾಯ್ಡು, ಟ್ರಸ್ಟ್ ಉಪಾಧ್ಯಕ್ಷರಾದ ಎನ್. ಎ. ಪಾಂಡುರಂಗ ,ಕಾರ್ಯದರ್ಶಿ ಸಿ. ವಿ. ವೆಂಕಟರಾವ್, ಸಹ ಕಾರ್ಯದರ್ಶಿ ಶ್ರೀನಿವಾಸ ತಂತ್ರಿ,ಹಾಗೂ ಸದಸ್ಯರುಗಳಾದ ವಿಜಯಾ ಚಿತ್ತರಂಜನ್,ಎಸ್. ಮುನಿರಾಮಯ್ಯ ಕೆ. ಎಸ್. ನಾರಾಯಣಮೂರ್ತಿಹೆಚ್. ಎನ್.ರವೀಂದ್ರನಾಥ್,ಡಿ. ಎ. ಅಮರನಾಥ್,ಮುಂತಾದವರು ಹಾಜರಿದ್ದರು.
ವರದಿ: ಬಿ.ಎ.ಬಾಬಾಜಾನ್


