ವಿಜಯನಗರ : ಜಿಲ್ಲೆ ಯುವಜನರನ್ನು ಕುಗ್ಗಿಸುವ ಕೆಲಸ ಕೈ ಬಿಡಿ ಯುವ ಕಾಂಗ್ರೆಸ್ ಪಧಾಧಿಕಾರಿಗಳ ಒತ್ತಾಯ ಹಗರಿಬೊಮ್ಮನಹಳ್ಳಿ ಅಶೋಕ್ ಬಿ.ನಾಯ್ಕ ವಜಾ ಪ್ರಕರಣದಿಂದಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಒಳ ರಾಜಕೀಯದ ಕಹಿ ಮುಖವಾಡ ಬಯಲಾಗಿದ್ದು, ಪಿತೂರಿಕೋರರ ಮಾತಿಗೆ ಮನ್ನಣೆ ನೀಡದೆ ಕೂಡಲೆ ವಜಾ ಹಿಂತೆಗೆಯಬೇಕು ಎಂದು ಪಕ್ಷದ ಯುವ ಕಾಂಗ್ರೆಸ್ ವಿಧಾನಸಭಾ ಕ್ಷೇತ್ರಾಧ್ಯಕ್ಷ ಪ್ರೇಮಕುಮಾರ್, ಯುವ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗೂಳಿ ಶರತ್ ಕುಮಾರ್, ಕೊಟ್ಟೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿನಯಕುಮಾರ್ ಸಿಡಿಮಿಡಿಗೊಂಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ, ಅಶೋಕ್ ಬಿ.ನಾಯ್ಕ ಪ್ರಕರಣದಿಂದಾಗಿ ಕಾಂಗ್ರೆಸ್ನಲ್ಲಿ ಕೇವಲ ಕಿವಿಕಚ್ಚುವ ಮತ್ತು ತಪ್ಪು ಮಾಹಿತಿ ನೀಡುವ ಪಕ್ಷದ್ರೋಹಿಗಳಿಗೆ ಮುಕ್ತ ವೇದಿಕೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಅಶೋಕ್ ಈಗಾಗಲೆ ಕಳೆದ ಹಲವು ವರ್ಷಗಳಿಂದಲೂ ಯುವಜನರಿಗೆ ಕ್ರೀಡೆಗೆ ಉತ್ತೇಜನ ನೀಡುತ್ತಿದ್ದಾರೆ. ಕಳೆದ ಬಾರಿ ಪಿಯುಸಿ ಪ್ರಶ್ನೋತ್ತರ ಪುಸ್ತಕಗಳನ್ನು ಒದಗಿಸುವ ಮೂಲಕ ಫಲಿತಾಂಶ ಹೆಚ್ಚಳಕ್ಕೆ ಸಹಕಾರಿಯಾಗಿದ್ದರು. ನೂರಾರು ಯುವಕರಿಗೆ ವೈಯಕ್ತಿಕ ಪ್ರೋತ್ಸಾಹಧನ, ಕೆಲವರಿಗೆ ಕ್ರೀಡಾಸಾಮಾಗ್ರಿ ವಿತರಣೆ, ರಕ್ತದಾನ ಶಿಬಿರ ಸೇರಿ ನಾನಾ ಸಾಮಾಜಿಕ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಪಕ್ಷದ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ನಾನಾ ತಾಲೂಕುಗಳಲ್ಲಿ ಸಭೆ ನಡೆಸಿ ಯುವಕರಿಗೆ ಪಕ್ಷದ ತತ್ವಸಿದ್ಧಾಂತ ಮತ್ತು ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಕುರಿತಂತೆ ಪ್ರೇರಣೆ ನೀಡಿದ್ದಾರೆ. ಇದೀಗ ಪಕ್ಷದ್ರೋಹಿಗಳ ಷಡ್ಯಂತ್ರದಿAದಾಗಿ ವಜಾಗೊಳಿಸಿರುವುದು ಯುವಜನರ ಆಕ್ರೋಶಕ್ಕೆ ಕಾರಣವಾಗಿದೆ. ಪಕ್ಷದ ಈ ನಿರ್ಧಾರವು ಸಾಮಾನ್ಯ ಆಡಳಿತಾತ್ಮಕ ಕ್ರಮವಲ್ಲ, ಬದಲಾಗಿ ಒಳರಾಜಕೀಯದ ಕ್ರೂರ ಆಟದ ಫಲಿತಾಂಶವೆAಬ ಅನುಮಾನ ಗಟ್ಟಿಯಾಗಿ ವ್ಯಕ್ತವಾಗುತ್ತಿದೆ.
ನಿಷ್ಠಾವಂತರ ಗುರಿ, ಯುವಜನರಿಗೆ ಘಾಸಿ : ಸಣ್ಣ ಕಾರಣ ತೋರಿ ವಜಾಗೊಳಿಸಿರುವುದು ಅಕ್ಷರಶಃ ಯುವಜನರ ಮೇಲೆ ನಡೆದ ಪಿತೂರಿಕೋರರ ರಾಜಕೀಯ ದಾಳಿಯಾಗಿದೆ. ಅಶೋಕ್ ಬಿ.ನಾಯ್ಕ ಅವರು ವಿಜಯನಗರ ಭಾಗದಲ್ಲಿ ಯುವಕರನ್ನು ಸಂಘಟಿಸಿ, ಕಾಂಗ್ರೆಸ್ ಯುವಪಡೆಯನ್ನು ಶಕ್ತಿಶಾಲಿಯಾಗಿ ರೂಪಿಸಿದವ ಅಶೋಕ್ ಬಿ.ನಾಯ್ಕ ಅವರ ವಜಾ ಕೈಬಿಡಬೇಕು. ಇಲ್ಲವಾದರೆ ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ ಸಮಿತಿ ನಾನಾ ಘಟಕದ ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲಿದ್ದಾರೆ ಎಂದು ಎಚ್ಚರಿಸಿದರು.
ವರದಿ : ಎಂ ಮಂಜುನಾಥ್

