ಬಾಗೇಪಲ್ಲಿ :ಪಟ್ಟಣದ ಕೊಡಿಕೊಂಡ ರಸ್ತೆಯಲ್ಲಿ ಜಾಮಿಯಾಶಾದಿ ಮಹಲ್ ಮುಂಭಾಗ ಜಮೀರ್ ಅಹ್ಮದ್ ಖಾನ್ ಗ್ರೂಪ್ ವತಿಯಿಂದ ಮಾಜಿ ಸಚಿವರು ಜಮೀರ್ ಅಹ್ಮದ್ ಖಾನ್ ರವರಿಗೆ
ಉಪಮುಖ್ಯಮಂತ್ರಿ ಹಾಗೂ ಶಾಸಕ ಶ್ರೀ ಎಸ್. ಎನ್ . ಸುಬ್ಬಾರೆಡ್ಡಿ ರವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಮುಖಂಡರಾದ ಅನ್ಸರ್ ಪಾಷಾ ನೇತೃತ್ವದಲ್ಲಿ ಪಟ್ಟಣದ ವಿವಿಧ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು.
ನಂತರ ಬಿ.ಜೆಡ್ ಗ್ರೂಪ್ ಅಧ್ಯಕ್ಷರು ಅನ್ಸರ್ ಪಾಷಾ ಅವರು ಮಾತನಾಡಿ, ಅಲ್ಪಸಂಖ್ಯಾತರ ಮುಖಂಡರು ಹಾಗೂ ಸರ್ವ ಜನಾಂಗದ ನಾಯಕರು ಬಿ ಜೆಡ್ ಜಮೀರ್ ಅಹ್ಮದ್ ಖಾನ್ ವರಿಗೆ ಉಪಮುಖ್ಯಮಂತ್ರಿ ಪ ಹಾಗೂ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ರವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು. ನಿರ್ಲಕ್ಷ ಮಾಡಿದರೆ 2028 ಚುನಾವಣೆಯಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷಕ್ಕೆ ವಿರೋಧಿಸುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರವೇ ಜಬಿವುಲ್ಲಾ, ಕೆಡಿಪಿ ಸದಸ್ಯರು ರಿಜ್ವಾನ್ ಸಾಬ್ , ಮೌಲಾನ ನಜೀರ್ ಸಾಬ್ ಸೈಯದ್ ಕಲೀಮುಲ್ಲಾ, , ವಸೀಮ್, ಎಂ ಎಸ್ ಮಸ್ತಾನ್, ಇಲಿಯಾಸ್ ,ವಾಜಿದ್,ಹಬೀಬ್ ಸಾಬ್, ಜಾವೀದ್ ಬೇಗ್, ಅಕ್ರಂ, ಅಬ್ಝಲ್ ಭಾಷಾ, ಹಾಫೀಸ್ ಸುಹೇಲ್, ಸೀನಾ ಮುಂತಾದವರು ಉಪಸ್ಥಿದ್ದರು.
ವರದಿ: ಬಿ.ಎ.ಬಾಬಾಜಾನ್


