ವಿಜಯನಗರ: ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾದ. ನೇಮಿರಾಜನಾಯ್ಕ. ಕಾಮಗಾರಿಕೆ ಗುತ್ತಿಗೆದಾರರಿಗೆ ಕೋಟಿಗೆ 30 ಪರ್ಸೆಂಟೇಜ್ ಕೊಡಬೇಕೆಂದು ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ. ಎಲ್ ಬಿ ಪಿ ಭೀಮನಾಯ್ಕ ಆರೋಪ ಮಾಡುತ್ತಿದ್ದಾರೆ ಇಲ್ಲಿನ ಮಾಲವಿ ಜಲಾಶಯದ ಹೊಸಕ್ರಸ್ಟ್ ಗೇಟ್ಗಗಳು ಅಳವಡಿಕೆಗೆ ಗುತ್ತಿಗೆದಾರರ ಹತ್ತಿರ ಕೋಟಿಗೆ 30 ಪರ್ಸೆಂಟೇಜ್ ಕಮಿಷನ್ ಕೊಡಬೇಕೆಂದು ಡಿಮ್ಯಾಂಡ್ ಮಾಡಿರುತ್ತಾರೆ ಹಾಗಾಗಿ.ಮಾಲವಿ ಜಲಾಶಯ ಕ್ರಸ್ಟ್ ಗೇಟ್ಗಳು ವಿಳಂಬವಾಗಿವೆ ಇದೇ ರೀತಿ ಸುಮಾರು ಕ್ಷೇತ್ರದ ಅಭಿವೃದ್ಧಿಗೆ ನಮ್ಮ ಸರ್ಕಾರದಿಂದ ಹಣ ಮಂಜೂರಾತಿ ಆಗಿದ್ದು. ನಾನು 2023 ಇಸ್ವಿಯಲ್ಲಿ ಶಾಸಕನಾಗಿದ್ದಾಗ ಸಿಸಿ ರಸ್ತೆ ಕಾಮಗಾರಿ ಮಾಡಿದ್ದು ಅದೇ ರಸ್ತೆಗೆ ಇವರುಮರು ಆ ಸಿಸಿ ರಸ್ತೆ ಕಾಮಗಾರಿ ಮಾಡಿ ಆ ಹಣವನ್ನು ದುರ್ಬಳಕೆ ಮಾಡಿರುತ್ತಾರೆ ಎಂದು ಕಿಡಿಕಾರಿದರು ಇದೇ ರೀತಿ ಮರಿಯಮ್ಮನಹಳ್ಳಿ ಭಾಗದಲ್ಲಿ. ಐಮಾಸ್ಕ್ ಗಳು ನಿರ್ಮಾಣವಾಗಿದ್ದು ಅದರ ಅಂದಾಜು ಮೊತ್ತ ಹಾಗೂ ಗುತ್ತಿಗೆದಾರರ ಹೆಸರು ನಾಮಫಲಕಗಳು ಇಲ್ಲ ಇದರ ಬಗ್ಗೆ ಮುಂದಿನ ದಿನಗಳಲ್ಲಿ ಮತ್ತೆ ನಾನು ಮಾಧ್ಯಮದ ಮಿತ್ರರಿಗೆ ಸಾಕ್ಷಿ ಪುರಾವೆ ಸಮೇತ ತಮ್ಮಮುಂದೆ ವಿವರಿಸುವೆ ಎಂದರು ಈ ಸಂದರ್ಭದಲ್ಲಿ ನೂತನ ಪುರಸಭೆ ಅಧ್ಯಕ್ಷರಾದಂತ ರೇಷ್ಮಾ ಸಿಕಂದರವರಿಗೆ ಅಭಿನಂದನೆಗಳು ಕೋರಿದರು ಈ ಸಂದರ್ಭದಲ್ಲಿ ಮಹಿಳಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದಂತ ಸಾಯಿರಬಾನು. ಹಾಗೂ ತಾಲೂಕುಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದಂತ. ಕುರಿಗೋಣಿಬಸವನವರು ಹಾಗೂ ಎಲ್ಲಾ ಗ್ಯಾರೆಂಟಿಯ ಅಧ್ಯಕ್ಷರು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮತ್ತಿತರು ಇದ್ದರು
ವರದಿ : ಎಂ ಮಂಜುನಾಥ್

