ನಿಪ್ಪಾಣಿ : ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಉಪ ವಿಭಾಗ ಕಾರ್ಯಾಲಯ ಸೇರಿ ಬೋರಗಾವ್ ಸಬ್ ಸ್ಟೇಷನ್ ವಿಭಾಗದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸಿಬ್ಬಂದಿ ಕೊರತೆಯಾಗುತ್ತಿದ್ದು ಸಿಬ್ಬಂದಿಯನ್ನು ತಕ್ಷಣ ಭರ್ತಿ ಮಾಡಬೇಕೆಂದು ಆಗ್ರಹಿಸಿ ಸದಲಗಾ ನಿಪಟ್ಟಣದ ರೈತರು, ಸಾರ್ವಜನಿಕರು ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಯುವ ಸಮಾಜ ಸೇವಾ ಸಂಘದ ವತಿಯಿಂದ ಸದಲಗಾ ಹೆಸ್ಕಾಂ ಕಾರ್ಯಾಲಯಕ್ಕೆ ತೆರಳಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಡಾಕ್ಟರ್ ಅಬ್ದುಲ್ ಕಲಾಂ ಸಂಘದ ಅಧ್ಯಕ್ಷ ಅಜರುದ್ದೀನ್ ಶೇಖಜಿ. ಮಾತನಾಡಿ ಈಗಾಗಲೇ ಹಲವು ಬಾರಿ ಸಿಬ್ಬಂದಿ ಕೊರತೆಯ ಕುರಿತು ಮೌಖಿಕವಾಗಿ ಹಾಗೂ ಲಿಖಿತವಾಗಿ ಅರ್ಜಿ ಸಲ್ಲಿಸಲಾಗಿದೆ.
ಆದರೂ ಅಧಿಕಾರಿಗಳಿಂದ ನಿರ್ಲಕ್ಷ ಧೋರಣೆ ಅನುಸರಿಸುತ್ತಿದ್ದು ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಉಡಾಫೆ ಉತ್ತರ ನೀಡಿ ರೈತರನ್ನು ಕಡೆಗಣಿಸಲಾಗುತ್ತಿದೆ. ಬರುವ ಒಂದು ವಾರದಲ್ಲಿ ಸಿಬ್ಬಂದಿ ನೇಮಕ ಮಾಡದಿದ್ದರೆ ಕಚೇರಿ ಎದುರು ಉಪವಾಸ ಸತ್ಯಾಗ್ರಹದೊಂದಿಗೆ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಸಂತೋಷ ಹೂಗಾರ,ಬಸವರಾಜ ವಾಲಿ, ಅಜರುದ್ದೀನ್ ಶೇಖಜಿ, ಸಚಿನ್ ಪಾಟೀಲ, ಪ್ರಭು ಹವಾಲ್ದಾರ್, ಸಂಜು ಕಾಂಬಳೆ,ರಾಜು ಅಮೃತಸಮ್ಮನ್ನವರ, ಶಿರೀಶ್ ಅಡಕೆ,ಸುನೀಲ್ ಬಾಗಡಿ,ಬಸವರಾಜ ಕೋಳಿ,ಪಂಕಜ ತಿಪ್ಪಣ್ಣವರ,ಮಾರುತಿ ಕಮತೆ, ಸದ್ದಾಂ ಮನೀಯರ, ಶೌಕತ್ ಅವಟಿ, ಹರೀಶ್ ಹಿತ್ತಲಮಣಿ, ಬಾದಶಾ ಕಂಪು, ಸೇರಿದಂತೆ ಸದಲಗಾ ಪಟ್ಟಣಸೇರಿ ಸುತ್ತಲಿನ ಹಳ್ಳಿಗಳ ರೈತರು,ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ : ಮಹಾವೀರ ಚಿಂಚಣೆ


