ಚೆನ್ನೈ: ನಟ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿರುವುದು ನನಗೆ ಅಸೂಯೆ ಇಲ್ಲ, ತುಂಬಾ ಸಂತೋಷವಾಗಿದೆ ಎಂದು ನಟ ರಜನಿಕಾಂತ್ ಹೇಳಿದ್ದಾರೆ.
ನಟ ರಜನಿಕಾಂತ್ ಅವರು ಭಾನುವಾರ ಚೆನ್ನೈನ ಪೋಯಸ್ ಗಾರ್ಡನ್ನಲ್ಲಿರುವ ತಮ್ಮ ನಿವಾಸದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ, ಇತ್ತೀಚೆಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿಯಾದ ಬೆನ್ನಲ್ಲೇ ಎದ್ದಿರುವ ರಾಜಕೀಯ ಟೀಕೆಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ತಾವು ರಾಜಕೀಯದಲ್ಲಿ ಸಕ್ರಿಯವಾಗಿಲ್ಲ ಮತ್ತು ವರ್ಷಗಳ ಹಿಂದೆಯೇ ಅದರಿಂದ ದೂರ ಸರಿದಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ತಮಗೂ ಮತ್ತು ವಿಜಯ್ಗೂ 28 ವರ್ಷಗಳ ವಯಸ್ಸಿನ ವ್ಯತ್ಯಾಸವಿದೆ ಎಂದು ಉಲ್ಲೇಖಿಸಿದ ಅವರು, ವಿಜಯ್ ಎರಡು ಪ್ರಮುಖ ರಾಜಕೀಯ ಪಕ್ಷಗಳ ವಿರುದ್ಧ ಸ್ವತಂತ್ರವಾಗಿ ನಿಂತು ತನಗೊಂದು ಗುರುತನ್ನು ಸಂಪಾದಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.
ತಮ್ಮ ರಾಜಕೀಯ ನಿಲುವು ಹಾಗೂ ಸ್ಟಾಲಿನ್ ಭೇಟಿಯ ಕುರಿತು ಬರುತ್ತಿರುವ ಸರಣಿ ಟೀಕೆಗಳಿಗೆ ಉತ್ತರಿಸದಿದ್ದರೆ, ಕೊನೆಗೆ ಸುಳ್ಳೇ ನಿಜವೆಂದು ಬಿಂಬಿತವಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕಾಗಿ ತಾವು ತುರ್ತು ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡುತ್ತಿರುವುದಾಗಿ ಸೂಪರ್ಸ್ಟಾರ್ ರಜನಿಕಾಂತ್ ತಿಳಿಸಿದ್ದಾರೆ.


