ಚಿಕ್ಕಬಳ್ಳಾಪುರ :ಜಿಲ್ಲೆಯ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಸಾರಥ್ಯದಲ್ಲಿ ರಾಜ್ಯಾಧ್ಯಕ್ಷರಾದ ಚಳುವಳಿ ಡಾ.ಚಲಪತಿ ಗೌಡರ ನೇತೃತ್ವದಲ್ಲಿ ಭೂಮಾಪಕರ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿಗಳಾದ ಫ್ರಭು, ಜಿ. ರವರ ಮುಖಾಂತರ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರಿಗೂ, ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರಿಗೂ ಮನವಿ ಪತ್ರವನ್ನು ಸಲ್ಲಿಸಲಾಯಿತ್ತು.
ಈ ವೇಳೆಯಲ್ಲಿ ಡಾ.ಚಲಪತಿ ಗೌಡರು ಮಾತನಾಡಿ,ಪರಬಾನಗಿ ಪಡೆದ ಭೂಮಾಪಕರ ನ್ಯಾಯಯುತವಾದ ಬೇಡಿಕೆಗಳನ್ನು ಕೂಡಲೇ ಮಧ್ಯೆ ಪ್ರವೇಶಿಸಿ, ಸರ್ಕಾರವು ಈಡೇರಿಸಬೇಕು,ಸುಮಾರು ಎರಡು ತಿಂಗಳಿಂದ ಭೂಮಾಪಕರ ಪ್ರತಿಭಟನೆಯಿಂದಾಗಿ ರೈತರಿಗೆ ತುಂಬ ತೊಂದರೆಗಳಾಗುತ್ತಿವೆ. ಸುಮಾರು ತಿಂಗಳುಗಳಿಂದ ಅಳತೆ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಇದರಿಂದ ಸಾರ್ವಜನಿಕರಿಗೆ ಹಾಗೂ ರೈತರಿಗೆ ತೊಂದರೆ ಉಂಟಾಗುತ್ತಿದೆ.ಅದ್ದರಿಂದ ಭೂಮಾಪಕರ ಬೇಡಿಕೆಗಳನ್ನು ಈಡೇರಿಸಿ, ರೈತರಿಗೂ, ಸಾರ್ವಜನಿಕರಿಗೆ ತೊಂದರೆಗಳಾಗದಂತೆ ಕ್ರಮವಹಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಬಿ.ಎ. ಬಾಬಾಜಾನ್, ಜಿಲ್ಲಾ ಉಪಾಧ್ಯಕ್ಷ ಆರ್. ರವೀಂದ್ರ, ರಾಜ್ಯ ಸಮಿತಿ ಸದಸ್ಯರಾದ ಕೆ.ದೇವರಾಜ್, ಯುವ ಘಟಕದ ಮನೋಜ್, ಕರವೇ ಮುಖಂಡರಾದ ಎಂ. ಕಾಂತರಾಜು, ಜಿ.ವಿ. ವೆಂಕಟಶಿವಪ್ಪ ,ಇದ್ದರೀಸ್ ವುಲ್ಲಾ, ಮಂಜುನಾಥ್ ಮುಂತಾದವರು ಹಾಜರಿದ್ದರು.
ವರದಿ: ಬಿ.ಎ.ಬಾಬಾಜಾನ್

