Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೆ ಎಂ ಎಫ್  ದೇಶದಲ್ಲಿಯೇ ಅತ್ಯಂತ ಜನನುರಾಗಿ ಹಾಲಿನ ಉತ್ಪನ್ನಗಳು: ಶಾಸಕ ಬಾಬಾಸಾಹೇಬ

Advertisement


ನೇಸರಗಿ: ದೇಶದಲ್ಲಿ ನಮ್ಮ ರಾಜ್ಯದ ಹೆಮ್ಮೆಯ ಕರ್ನಾಟಕ ರಾಜ್ಯ ಹಾಲು ಒಕ್ಕೂಟದ ( ಕೆ ಎಂ ಎಫ್) ವತಿಯಿಂದ ತಯಾರಾಗುವ ಹಾಲು ಮತ್ತು ಹಾಲಿನ ಅನೇಕ ಉತ್ಪನ್ನಗಳು ದೇಶದ ಎಲ್ಲರಿಗೂ ಪ್ರಿಯವಾಗಿದ್ದು, ದೇಶದ ಜನತೆ ವಿಶ್ವಾಸದಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಬಳಕೆ ಮಾಡುತ್ತಿದ್ದು ಜನರ ಪ್ರೀತಿ ವಿಶ್ವಾಸ ಗಳಿಸಿದೆ ಎಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
ಅವರು ಶನಿವಾರದಂದು ಗ್ರಾಮದ ಪೊಲೀಸ್ ಠಾಣೆ ಎದುರಿಗೆ ನೂತನವಾಗಿ ನಿರ್ಮಾಣಗೊಂಡಿರುವ ನ್ಯೂ ಹೈಟೆಕ್ ಮಿಲ್ಕ್ ಪಾರ್ಲರ ಕೆ ಎಂ ಎಫ್ ಮಳಿಗೆ  ಉದ್ಘಾಟನೆ ನೆರವೇರಿಸಿ ಮಾತನಾಡಿ ಈ ನೂತನ ಮಳಿಗೆಯ ಸದುಪಯೋಗವನ್ನು ನೇಸರಗಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನತೆ ಪಡೆಯಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಬಾಬಾಸಾಹೇಬ ಪಾಟೀಲ ಹಾಗೂ ಕೆ ಎಂ ಎಫ್  ಅಧಿಕಾರಿಗಳನ್ನು ಸತ್ಕರಿಸಲಾಯಿತು.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹಣಬರಹಟ್ಟಿ  ಗ್ರಾಮದ ಹಿರೇಮಠದ ಷ ಬ್ರ ಬಸವಲಿಂಗ ಶಿವಾಚಾರ್ಯರು ವಹಿಸಿದ್ದರು.
ಈ ವೇಳೆ  ಅಥಣಿಯ ಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಕೆ ಎಂ ಎಫ್ ನಿರ್ದೇಶಕರಾದ ಬಾಬುರಾವ ವಾಘಮೋಡೆ, ಪಿ ಎಲ್ ಡಿ ಬ್ಯಾಂಕ ನಿರ್ದೇಶಕರಾದ ಶಂಕರಗೌಡಪಾಟೀಲ , ಕ್ಷೇತ್ರಧಿಕಾರಿ ಉಮೇಶ ನಾಯ್ಕ, ಮಾಜಿ ಎ ಪಿ ಎಂ ಸಿ ಅಧ್ಯಕ್ಷ ಬರಮಣ್ಣ ಸತ್ತೇನ್ನವರ, ಮಾಜಿ ಗ್ರಾ ಪಂ ಅಧ್ಯಕ್ಷ ವೀರಭದ್ರ ಚೋಭಾರಿ, ಸುಜಾತ ಪಾಟೀಲ, ಸುರೇಶ ಕಂಡ್ರಿ, ಬಸವರಾಜ ಚಿಕ್ಕನಗೌಡ್ರ, ಸುರೇಶ ಅಗಸಿಮನಿ, ರವಿ ಸಿದ್ದಮ್ಮನವರ, ಡಿ ಎಸ್ ಎಸ್ ಅಧ್ಯಕ್ಷರಾದ ಸುರೇಶ ರಾಯಪ್ಪಗೋಳ, ರಮೇಶ ರಾಯಪ್ಪಗೋಳ, ಶಿವನಪ್ಪ ಮದೇನ್ನವರ,ಸಿ ಆರ್ ಹೊಂಡಪ್ಪಣ್ಣವರ, ಅಜಿತ್ ಗಸ್ತಿ, ಮಾಲೀಕರಾದ ಶ್ರೀಕಾಂತ ಉಳವಿ, ಶಿವಲೀಲಾ ಉಳವಿ, ಶ್ರೀಧರ ಉಳವಿ ಸೇರಿದಂತೆ ನೇಸರಗಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಹಿರಿಯರು, ಗ್ರಾಮಸ್ಥರು,ಕೆ ಎಂ ಎಫ್  ಹಾಲಿನ ವ್ಯಾಪಾರಿಗಳು ಇದ್ದರು.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಂಬಲ್ಡನ್ ಟೆನಿಸ್: ಫೈನಲ್ ತಲುಪಿದ ಜಾನ್ನಿಕ್ ಸಿನ್ನೇರ್ಇಂದು ಜಿಂಬಾಬ್ವೆ- ಬಾಂಗ್ಲಾದೇಶ ಮೂರನೇ ಏಕದಿನ ಪಂದ್ಯಭಾರತ ಇಂಗ್ಲೆAಡ್ ಕಡೆಯ ಟ್ವೆಂಟಿ-೨೦ ಇಂದುಮೊಬೈಲ್‌ನಲ್ಲಿ ರೈಲು ಟಿಕೆಟ್ ತೋರಿಸಿದ್ದರೇ ದಂಡ : ರೈಲು ಇಲಾಖೆ ಹೊಸ ನಿಯಮ ಸುಳ್ಳು ಮಾಹಿತಿ ನೀಡಿ ಸರ್ಕಾರಿ ನೌಕರಿ  : ಕೆಪಿಎಸ್ಸಿ ಅಧ್ಯಕ್ಷರ ಪುತ್ರಿ ವಿರುದ್ಧ ಎಫ್‌ಐಆರ್ ತಿಪಟೂರಿನ ಕೊಬ್ಬರಿ, ಸಾಣಿಕಟ್ಟೆ ಉಪ್ಪು ಸೇರಿ ರಾಜ್ಯದ ನಾಲ್ಕು ಉತ್ಪನ್ನಗಳಿಗೆ ಜಿಐ ಮಾನ್ಯತೆ ಉತ್ತಮ ಮೊತ್ತದತ್ತ ಭಾರತ ವನಿತೆಯರುಸರ್ವೋಚ್ಚ ನ್ಯಾಯಾಲಯದಲ್ಲಿ ಆಘಾತಕಾರಿ ಘಟನೆ : ಕಡತಗಳನ್ನ ಸಿಜೆಗೆ ಎಸೆದ ಅರ್ಜಿದಾರಸಾಂಸ್ಕೃತಿಕ ಹಾಗೂ ಕ್ರೀಡೆ ಶಿಕ್ಷಣದ ಮುಖ್ಯ ಅಂಗ:ಬಂಗಾರಿ ಆರ್ ಎಸ್ ಎಸ್ ಸಭೆ ಬಳಿಕ ಏನಾದರೂ ಅನಾಹುತ ಆಗುತ್ತೆ : ಬಿ. ಕೆ ಹರಿಪ್ರಸಾದ್