ಸಿಂಧನೂರು : ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಭೀದಿ ಬದಿ ವ್ಯಾಪಾರಿಗಳ ಅಂಗಡಿಗಳನ್ನು ತೆರವುಗೊಳಿಸಿ ಹಲವು ತಿಂಗಳ ಕಳೆದು ಹೋದರೂ ತಾಲೂಕ ಆಡಳಿತದಿಂದ ಇನ್ನೂವರಿಗೂ ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸದ ಹಿನ್ನೆಲೆ ತೋಟಗಾರಿಕೆ ಇಲಾಖೆಯ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಂಡು12 ದಿನಗಳು ಕಳೆದರೂ ಯಾರೊಬ್ಬ ಅಧಿಕಾರಿಗಳು ನಮ್ಮ ಹೋರಾಟಕ್ಕೆ ಸ್ಪಂದನೆ ನೀಡದಿರುವುದರಿಂದ ಸ್ಥಳೀಯ ಶಾಸಕರನ್ನು ಸಂಪರ್ಕಿಸಿದಾಗ ತಾತ್ಕಾಲಿಕವಾಗಿ ಡಬ್ಬಾ ಅಂಗಡಿಗಳನ್ನು ಇಟ್ಟುಕೊಳ್ಳಿ ಎಂದು ಹೇಳಿದ್ದರಿಂದ ನಾವುಗಳು ತೋಟಗಾರಿಕೆ ಇಲಾಖೆ ಮುಂದಿನ ಪುಟ್ ಪಾತ್ ಜಾಗದಲ್ಲಿ ಡಬ್ಬಾ ಅಂಗಡಿಗಳನ್ನು ಇಟ್ಟುಕೊಳ್ಳಲು ಮುಂದಾಗಿದ್ದೇವೆ ಸ್ಥಳಕ್ಕೆ ತಹಸೀಲ್ದಾರ್ ಮತ್ತು ನಗರ ಸಭೆಯ ಪೌರಾಯುಕ್ತರ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಅಂಗಡಿಗಳನ್ನು ತೆರವುಗೊಳಿಸಲು ಮುಂದಾದಾಗ
ಪ್ರತಿಭಟನಾಕಾರು,ರಸ್ತೆ ಗಿಳಿದು ಪ್ರತಿಭಟಿಸಿದರು.
ಅಧಿಕಾರಿಗಳ ಮಧ್ಯ ಮಾತಿನ ಚಿಕಿಮಿಕಿ ನಡೆದು ಅಧಿಕಾರಿಗಳು ಶಾಸಕರನ್ನು ಸಂಪರ್ಕಿಸಿದಾಗ ಬೀದಿಬದಿಯ ವ್ಯಾಪಾರಿಗಳಿಗೆ ತೊಂದರೆ ಕೊಡಬೇಡಿ ತೋಟಗಾರಿಕೆ ಇಲಾಖೆಯ ಖಾಲಿ ಜಾಗದಲ್ಲಿ ತಾತ್ಕಾಲಿಕವಾಗಿ ಬಾಡಿಗೆ ರೂಪದಲ್ಲಿ ವ್ಯಾಪಾರ ಮಾಡಿಕೊಳ್ಳಲಿ ಕೆಲವು ತಿಂಗಳಗಳಲ್ಲಿ ನಗರದ ಹಳೆ ಆಹಾರ ಗೋಡನ್ ತೆರವುಗೊಳಿಸಿ ಹೈಟೆಕ್ ಕಟ್ಟಡ ನಿರ್ಮಿಸಿ ಬೀದಿಬದಿ ವ್ಯಾಪಾರಿಗಳಿಗೆ ಬಾಡಿಗೆ ರೂಪದಲ್ಲಿ ಮಳಿಗೆಗಳನ್ನು ನಿರ್ಮಿಸಲಾಗುವುದು ಈಗಾಗಲೇ ನಾನು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ ಎಂದು ಶಾಸಕ ಹಂಪನಗೌಡ ಬಾದರ್ಲಿಅವರ ಮೌಖಿಕ ಆದೇಶದ ಮೇರೆಗೆ ಅಧಿಕಾರಿಗಳು ಸುಮ್ಮನಾದರು ಎಂದು ಹೇಳಲಾಗಿದೆ .
ಈ ಸಂದರ್ಭದಲ್ಲಿ : ಖಾಸಿಂಸಾಬ್ ಕಾರ್ಪೊರೇಟರ್. ರಮೇಶ್ ಪಾಟೀಲ್ ಬೇರಿಗಿ. ಚಂದ್ರಶೇಖರ್ ಗೊರಬಾಳ. ಬಸವರಾಜ ಬಾದರ್ಲಿ. ಬಸವಂತರಾಯ ಗೌಡ. ಶಾಮಿದ್ಸಾಬ್. ಹಾಜಿ ಬಾಬು. ಅಸ್ಲಾಂ ಪಾಷಾ. ಹಬೀದ ಅಲಿ. ಹುಸೇನ್ ಬಾಷ್. ಜಾಗೀರ್ ಪಾಷಾ. ಯಾಕೋಬ್. ಬಸವರಾಜ. ರಿಜ್ವಾನ್ ಸಾಧಿಕ್. ಮುಸ್ತಾಪ್ ಮೌಲಾಸಾಬ್. ಸಲೀಂ ಪಾಶ್. ಸೇರಿದಂತೆ ಇನ್ನೂ ಅನೇಕರು ಇದ್ದರು.
ವರದಿ : ಬಸವರಾಜ ಬುಕ್ಕನಹಟ್ಟಿ.

