Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಾರ್ವಜನಿಕರ ಗಮನಕ್ಕೆ : ಮುಂದಿನ 24 ಗಂಟೆಗಳ ಕಾಲ ರಾಜ್ಯದ ಆನ್ ಲೈನ್ ಸೇವೆಗಳು ಬಂದ್ 

Advertisement

ಬೆಂಗಳೂರು: ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರದಲ್ಲಿ (KSDC) ತುರ್ತು ನಿರ್ವಹಣಾ ಕಾರ್ಯ ನಡೆಯುತ್ತಿರುವುದರಿಂದ ರಾಜ್ಯ ಸರ್ಕಾರದ ಪ್ರಮುಖ ಆನ್ಲೈನ್ ಸೇವೆಗಳು ತಾತ್ಕಾಲಿಕವಾಗಿ ಲಭ್ಯವಿರುವುದಿಲ್ಲ ಎಂದು ತುರ್ತು ಸೂಚನೆ ಹೊರಡಿಸಲಾಗಿದೆ.

ಸೇವೆಗಳು ಸ್ಥಗಿತಗೊಳ್ಳುವ ಸಮಯ

ಆರಂಭ: ಜೂನ್ 25, 2026ರ ರಾತ್ರಿ 9:00 ಗಂಟೆಯಿಂದ

ಮುಕ್ತಾಯ: ಜೂನ್ 26, 2026ರ ರಾತ್ರಿ 9:00 ಗಂಟೆಯವರೆಗೆ

ಒಟ್ಟು ಅವಧಿ: 24 ಗಂಟೆಗಳು

ಪ್ರಮುಖ ಸೇವೆಗಳು:

ನಾಗರಿಕ ಸೇವಾ ಕೇಂದ್ರಗಳು: ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ನ ಡಿಜಿಟಲ್ ಸೇವೆಗಳು.

ಕಂದಾಯ ಇಲಾಖೆ ಸೇವೆಗಳು: ನಾಡಕಚೇರಿ ಸೇವೆಗಳಾದ ಜಾತಿ, ಆದಾಯ, ವಾಸಸ್ಥಳ ಪ್ರಮಾಣಪತ್ರಗಳು ಹಾಗೂ ಭೂಮಿ ಪೋರ್ಟಲ್ನ ಪಹಣಿ (RTC) ಮತ್ತು ಮ್ಯುಟೇಷನ್ ಸೇವೆಗಳು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ: ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿ ಪ್ರಕ್ರಿಯೆಗಳು.

ಸಾರಿಗೆ ಇಲಾಖೆ (Sarathi & Vahan): ಡಿಎಲ್ (DL), ಎಲ್‌ಎಲ್ (LL), ಆರ್ಸಿ (RC) ಮತ್ತು ಆನ್ಲೈನ್ ಶುಲ್ಕ ಪಾವತಿ.

ನೋಂದಣಿ ಮತ್ತು ಮುದ್ರೆಗಳ ಇಲಾಖೆ (KAVERI 2.0): ಆಸ್ತಿ ನೋಂದಣಿ, ಇಸಿ (EC) ಮತ್ತು ಮಾರುಕಟ್ಟೆ ಮೌಲ್ಯ ತಪಾಸಣೆ.

ಇತರ ಸೇವೆಗಳು: ಸೇವಾ ಸಿಂಧು (Seva Sindhu) ಮತ್ತು ಇ-ಕೆವೈಸಿ (e-KYC) ಪ್ರಕ್ರಿಯೆಗಳು.

ಸಾರ್ವಜನಿಕರಿಗೆ ಪ್ರಮುಖ ಎಚ್ಚರಿಕೆ: ಹಣ ಕಟ್ ಆಗುವ ಅಪಾಯ!

ಈ 24 ಗಂಟೆಗಳ ಅವಧಿಯಲ್ಲಿ ಯಾವುದೇ ಆನ್ಲೈನ್ ಅರ್ಜಿ ಸಲ್ಲಿಕೆ ಅಥವಾ ಶುಲ್ಕ ಪಾವತಿ ಪ್ರಕ್ರಿಯೆಗಳಿಗೆ ಪ್ರಯತ್ನಿಸಬೇಡಿ. ಸರ್ವರ್ ದೋಷದಿಂದಾಗಿ ನಿಮ್ಮ ಅರ್ಜಿ ವಿಫಲವಾಗಿ, ಹಣ ನಷ್ಟವಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ನಾಗರಿಕರು ಸಹಕರಿಸಬೇಕಾಗಿ ವಿನಂತಿ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST