
ನಂತರ ಅವರು ಮಾತನಾಡಿ ಜೋಳ ಕಟಾವ್ ಮಾಡಿ ಐದು ತಿಂಗಳ ಗತಿಸಿದೆ ಖರೀದಿ ಸಂದರ್ಭದಲ್ಲಿ ಗುಣಮಟ್ಟ ಪರೀಕ್ಷಿಸುವ ನೆಪದಲ್ಲಿ ಕೇಂದ್ರ ಸರ್ಕಾರದ ಉಗ್ರಾಣ ಗ್ರೇಡರ್ ಗಳು ರೈತರಿಗೆ ತೊಂದರೆ ಕೊಡುತ್ತಿದ್ದಾರೆ ರಾಜ್ಯ ಸರ್ಕಾರದ ಅಧೀನದಲ್ಲಿರುವ ರಾಜ್ಯ ಉಗ್ರಣದಲ್ಲಿ ದಾಸ್ತಾನಿಗೆ ಅವಕಾಶ ನೀಡಿ ಆದೇಶ ಹೊರಡಿಸಬೇಕು ಮತ್ತು ಹಿಂಗಾರು ಋತುವಿನಲ್ಲಿ ನೋಂದಾಣಿಯಾಗಿರುವ ಎಲ್ಲಾ ರೈತರ ಸಂಪೂರ್ಣ ಜೋಳ ಖರೀದಿ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದರು ಸಹ ಪರಿಹಾರ ನೀಡುವಲ್ಲಿ ಸರ್ಕಾರ ನಿರ್ಲಕ್ಷ ಧೋರಣೆ ಖಂಡಿಸಿ ಇಂದು ಸೋಮವಾರ ಸಿಂಧನೂರು ಬಂದ್ ಕರೆಯಲಾಯಿತು ಎಂದು ಪ್ರಗತಿಪರ ಸಂಘಟನೆಯ ಒಕ್ಕೂಟದ ಅಧ್ಯಕ್ಷ ನಾಗರಾಜ್ ಪೂಜಾರಿ ತಿಳಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ. ಅಮೀನ್ ಪಾಷಾ ದಿದ್ದಗಿ. ಬಸವರಾಜ ಗೋಡಿಹಾಳ. ನಾಗರಾಜ ಪೂಜಾರಿ. ರಮೇಶ್ ಪಾಟೀಲ್ ಬೇರಿಗಿ. ಬಸವಂತರಾಯ ಗೌಡ ಕಲ್ಲೂರು. ಬಸವರಾಜ ಹಂಚಿನಾಳ. ಚಿಟ್ಟಿ ಬಾಬು. ದುರ್ಗೇಶ ಬಾಲಿ. ಅಮ್ಮಿರಾಜ ಮ್ಯಾಕಲ್. ವಿಜಯಕುಮಾರ್. ಪರಶುರಾಮ್ ಭಂಡಾರಿ ಇನ್ನು ಅನೇಕರಿದ್ದರು
ವರದಿ:ಬಸವರಾಜ ಬುಕ್ಕನಹಟ್ಟಿ


