ಗೋಕಾಕ : ಹಣದ ವಿಚಾರಕ್ಕಾಗಿ ಜಗಳವಾಡುತಿದ್ದ ಎರಡು ಗುಂಪಿನ ನಡುವೆ ಜಗಳ ಆಡುತಿದ್ದವರನ್ನು ನೋಡಲು ಹೋದ ಕ್ರಿಕೇಟ ಆಟ ಆಡುತಿದ್ದ ಮೂವರ ಮೇಲೆ ಮನಸೋ ಇಚ್ಚೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಗೋಕಾಕ ನಗರದ ಕೈಗಾರಿಕೆ ಪ್ರದೇಶ ಲಕ್ಷ್ಮೀದೇವಿ ದೇವಸ್ಥಾನದ ಹಿಂಬಾಗದಲ್ಲಿ ನಡೆದಿದೆ.
ಗೋಕಾಕ ನಗರದಲ್ಲಿರುವ ಅಕ್ಸಪರ್ಡ್ ಆಂಗ್ಲ ಮಾದ್ಯಮ ಶಾಲೆಯ ಮಾಲಿಕರಾದ ಅಪ್ಪಾಸಾಬ ಬಜಂತ್ರಿ,ಅನಿಕೇತ ಬಜಂತ್ರಿ,ಆನಂದ ಬಜಂತ್ರಿ,ರಾಘವ ಬಜಂತ್ರಿ ಮತ್ತು ಮಹಿಳೆಯರು ಹಲವಾರು ಜನರ ಹತ್ತಿರ ಹಣ ಇಸಿದುಕೊಂಡು ಪರತ ಕೊಡದ ಕಾರಣ ದಿನಾಲು ಹಲವಾರು ಜನ ನೊಂದವರು ಅಪ್ಪಾಸಾಬ ಬಜಂತ್ರಿ ಹತ್ತಿರ ಹಣ ಕೇಳುತಿದ್ದರು.
ದಿನಾಲು ಒಂದಲ್ಲ ಒಂದು ಕಾರಣ ಹೇಳಿ ಕಳುಸಿದ್ದ ಅಷ್ಟೆ ಅಲ್ಲದೆ ಜಾತಿ ನಿಂದನೆ ಕೇಸ ಹಾಕುವ ಬೇದರಿಕೆ ಹಾಕುತಿದ್ದ ಅಪ್ಪಾಸಾಬ ಬಜಂತ್ರಿ ಹಾಗೂ ಕುಟುಂಬಸ್ಥರು.
ಇದೆ ಕಾರಣಕ್ಕಾಗಿ ಇನ್ನೊಬ್ಬರ ಜೊತೆ ಜಗಳ ಆಗುತ್ತಿದ್ದನ್ನು ಅಲ್ಲಿಯೆ ಪಕ್ಕದಲ್ಲಿ ಕ್ರಿಕೇಟ ಆಡುತಿದ್ದ ಯುವಕರು ಜಗಳದ ಶಬ್ದ ಕೇಳಿ ನೋಡಲು ಹೊದಾಗ ಇವರು ಕೂಡ ಜಗಳ ಆಡಲು ಬಂದಿದ್ದಾರೆಂದು ಮಾಡುತಿದ್ದ ಅಪ್ಪಾಸಾಬ ಬಜಂತ್ರಿ ಕುಟುಂಬಸ್ಥರು ಸೇರಿ ರಾಡ ,ಗಂಟೆ, ಬಡಿಗೆಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ,
ಅದರ ಜೊತೆಯಲ್ಲಿ ಹಣ ಕೇಳಲು ಬಂದ ಮಹಿಳೆಯನ್ನು ಕೂಡ ಬಡಿಗೆಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ,
ಹಲ್ಲೆಗೊಳಗಾದ 3 ಯುವಕರಲ್ಲಿ ಅರುಣ ಎಂಬಾತನ ಪರಿಸ್ಥಿತಿ ಚಿಂತಾಜನಕ ಆಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಇನ್ನೂಳಿದ ಇಬ್ಬರನ್ನು ಗೋಕಾಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ಈ ಘಟನೆ ಬಗ್ಗೆ ಗೋಕಾಕ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ನು ಹಲ್ಲೆ ಮಾಡಿದವರಲ್ಲಿ ಒರ್ವ ಬಾಲಕನಾಗಿದ್ದಾನೆಂದು ತಿಳಿದು ಬಂದಿದೆ,
ಅಪ್ಪಾಸಾಬ ಬಜಂತ್ರಿ ಇವರಿಂದ ಹಲ್ಲೆಗೊಳಗಾದ ಅರುಣ ಇತನ ಸಂಬಂದಿಕರು ಇನ್ನೂ ಶಾಲೆಯಲ್ಲಿ ಯಾವ ರೀತಿ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆಯಿಂದ ಯಾವಾಗ ಎನು ಆಗುತ್ತದೆ ಎಂಬುದು ಬುದಿ ಮುಚ್ಚಿದ ಕೆಂಡದಂತಿದೆ ಸದ್ಯದ ಗೋಕಾಕ ಪರಿಸ್ಥಿತಿ.
ವರದಿ : ಮನೋಹರ ಮೇಗೇರಿ


