Join The Telegram | Join The WhatsApp |
ಬೆಳಗಾವಿ:ಜ್ಞಾನಪ್ರಕಾಶ್ ಸ್ವಾಮೀಜಿಗಳು, ಮಾತನಾಡಿ ಪ್ರತಿಯೊಬ್ಬರಲ್ಲಿ ಬುದ್ಧ ಬಸವ ಅಂಬೇಡ್ಕರ, ಅವರ ತತ್ವಗಳನ್ನು ಅನುಸರಿಸಲು, ಮಾನವ ಬಂಧುತ್ವ ವೇದಿಕೆಯ, ಸಹಯೋಗದಲ್ಲಿ ಜನಜಾಗೃತಿ ಮೂಡಿಸಲಾಗುತ್ತಿದ್ದು ,ರಾಜಕೀಯ ಒತ್ತಡಕ್ಕೆ ಬಲಿಯಾಗದೆ “ವೋಟ ಬ್ಯಾಂಕಿಂಗ್ ರಾಜಕೀಯದಲ್ಲಿ, ಸಮಾಜದ ಭಾವನೆಗಳನ್ನು ,ನಷ್ಟಗೊಳಿಸಲಾಗುತ್ತಿದೆ ಕೇವಲ ಹಿಂದುತ್ವವೇ, ಮತಗಳ ಪರಿಪತ್ರಿಕೆಯಾಗಿದ್ದು ,ಅದರಲ್ಲಿ ಬಂಧುತ್ವ ಬೇಕಾಗಿದೆ ಜಾತಿ ಧರ್ಮಗಳ, ದ್ವೇಷ ಹೆಚ್ಚಿಸಿ ಆಡಳಿತ ಪ್ರತಿನಿಧಿಗಳು, ಬೇಳೆ ಬೇಯಿಸಿಕೊಳ್ಳುತ್ತಿದ್ದು ಮತದಾರರಿಂದಲೇ, ಸಮಾಜ ವ್ಯವಸ್ಥೆ ಬದಲಾಗಲಿದೆ ,ಎಂದು ಮೈಸೂರಿನ ಉರಿಲಿಂಗ ಮಠದ ಪರಮ ಪೂಜ್ಯ ಜ್ಞಾನಪ್ರಸಾದ ಸ್ವಾಮೀಜಿಗಳು ತಿಳಿಸಿದರು ,ನಿಪ್ಪಾಣಿ ಪಟ್ಟಣದ ಮುನ್ಸಿಪಲ್ ಹೈಸ್ಕೂಲು ಮೈದಾನದಲ್ಲಿ, ರವಿವಾರ ಸಂಜೆ ಮಾನವ ಬಂಧುತ್ವ ವೇದಿಕೆಯ, ಸಹಯೋಗದಲ್ಲಿ ನಡೆದ ಮನೆಮನೆಗೆ, ಬುದ್ಧ ಬಸವ ಅಂಬೇಡ್ಕರ, ಜನಜಾಗೃತಿ ಹೆಬ್ಬಾಳ ಬಸವ ಭವನದ ಬಸವ ಚೇತನ ದೇವರು, ಹಾಗೂ ವೈಶಾಲಿ ಡೋಳಸ ಮಾತನಾಡಿದರು, ಅಧ್ಯಕ್ಷತೆ ವಹಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬುದ್ಧ ಬಸವ ಅಂಬೇಡ್ಕರ ,ತತ್ವಗಳು ನಶಿಸಿ ಹೋಗುತ್ತಿದ್ದು ಅನುಯಾಯಿಗಳಾದ ,ನಾವು ಅವರ ತತ್ವಗಳನ್ನು ಉಳಿಸಿಕೊಳ್ಳಬೇಕಾಗಿದೆ, ಜೊತೆಗೆ ಗಾಂಧಿ ನೆಹರು ಪಂಡಿತರಂತಹ ,ವಿಚಾರಗಳೂ ನಮ್ಮಿಂದ ದೂರವಾಗುತ್ತಿವೆ,ಇವರ ವಿಚಾರಗಳನ್ನು ನಾವು ಪುಸ್ತಕದಲ್ಲಿ ಓದುತ್ತಾ ಇದ್ದೆವು, ಇವೆಲ್ಲವನ್ನೂ ಇಂದು ಮುಂದುವರಿಸಿಕೊಂಡು, ಹೋಗಬೇಕಾಗಿದೆ ಆದರೆ ,ಗಾಂಧಿ ನೆಹರು ಬುದ್ಧ ಬಸವ ಸ್ಥಾನದಲ್ಲಿ, ಈಗ ಗೋಡ್ಸೆ ಸಾವರ್ಕರ್ ಅವರ ವಿಚಾರ ಬರುತ್ತಿದ್ದು ,ಸಮಾಜದಲ್ಲಿ ಕೋಮು,ಗಲಭೆ, ಹೆಚ್ಚಾಗುತ್ತಿದೆ ಆದ್ದರಿಂದ ನಮಗೋಸ್ಕರ, ಹೋರಾಡಿದ ನಾಯಕರನ್ನು, ಮರೆಯಬಾರದು ನಮ್ಮ ಕೈ ಕಾಲಿಗೆ, ಬೇಡಿ ಹಾಕಿಲ್ಲ ಆದರೆ ಮೆದುಳಿಗೆ ಬೇಡಿ ಹಾಕುವ ಪ್ರಯತ್ನ ನಡೆದಿದೆ, ಎಂದು ತಿಳಿಸಿದರು ,ಸಮಾರಂಭದಲ್ಲಿ ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ಮಾಜಿ ಸಚಿವ ವೀರ ಕುಮಾರ ಪಾಟೀಲ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಲಕ್ಷ್ಮಣರಾವ ಚಿಂಗಳೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ ಕದಂ, ಯುವನಾಯಕ ಉತ್ತಮ ಪಾಟೀಲ, ಪಂಕಜ್ ಪಾಟೀಲ, ಅಶೋಕ ಅಸೂದೆ,ಬಸವರಾಜ ಪಾಟೀಲ, ಸುಪ್ರಿಯಾ ಪಾಟೀಲ,ಅಣ್ಣಾಸಾಹೇಬ ಹವಲೇ, ಮಹಾವೀರ ಮೋಹಿತೆ , ಕಾಂಗ್ರೇಸ್ ಪಕ್ಷದ ನಗರಸೇವಕರು, ಸೇರಿದಂತೆ ಮಾಜಿ ,ಜಿಲ್ಲಾ ಪಂಚಾಯತಿ ಸದಸ್ಯರು, ತಾಲೂಕ ಪಂಚಾಯತಿ ಸದಸ್ಯರು,ಗ್ರಾಮ ಪಂಚಾಯಿತಿ ಸದಸ್ಯರು, ಹಾಗೂ ಸುತ್ತಮೂತ್ತಲಿನ, ಹಳ್ಳಿಗಳ ಸಾವಿರಾರು ಜನರು, ಮಹಿಳೆಯರು,ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ ಶಿವಾಜಿ. ಎನ್. ಬಾಲೆಶಗೋಳ
Join The Telegram | Join The WhatsApp |