Ad imageAd image

ಬಸವನ ಬಾಗೇವಾಡಿ ತಾಲೂಕಿನ ಮಣ್ಣೂರ: ಗ್ರಾಮದಲ್ಲಿ ಪಿಕೆಪಿಎಸ್‌ ಬ್ಯಾಂಕಿನ ನೂತನ ಕಟ್ಟಡವನ್ನು ಸಚಿವರು ಶಿವಾನಂದ್ ಪಾಟೀಲ್ ಉದ್ಘಾಟನೆ ಮಾಡಿದರು

Bharath Vaibhav
ಬಸವನ ಬಾಗೇವಾಡಿ ತಾಲೂಕಿನ  ಮಣ್ಣೂರ: ಗ್ರಾಮದಲ್ಲಿ ಪಿಕೆಪಿಎಸ್‌ ಬ್ಯಾಂಕಿನ ನೂತನ ಕಟ್ಟಡವನ್ನು ಸಚಿವರು ಶಿವಾನಂದ್ ಪಾಟೀಲ್   ಉದ್ಘಾಟನೆ ಮಾಡಿದರು
WhatsApp Group Join Now
Telegram Group Join Now

ಬಸವನ ಬಾಗೇವಾಡಿ : ತಾಲೂಕಿನ ಮಣ್ಣೂರ: ಗ್ರಾಮದಲ್ಲಿ ಪಿಕೆಪಿಎಸ್‌ ಬ್ಯಾಂಕಿನ ನೂತನ ಕಟ್ಟಡವನ್ನು ಸಚಿವರು ಶಿವಾನಂದ್ ಪಾಟೀಲ್ ಉದ್ಘಾಟನೆ ಮಾಡಿದರು

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಚಿವರು ಮೈಕ್ರೋಫೈನಾನ್ಸ್‌ಗಳಲ್ಲಿ ಸಾಲ ಪಡೆದುಕೊಂಡು ಜೀವ ಕಳೆದುಕೊಳ್ಳುವುದಕ್ಕಿಂತ ಪಿಕೆಪಿಎಸ್ ಹಾಗೂ ಡಿಸಿಸಿ ಬ್ಯಾಂಕುಗಳಲ್ಲಿ ಸಾಲ ಪಡೆದುಕೊಳ್ಳುವ ಕೆಲಸ ಮಾಡಬೇಕೆಂದು ಹೇಳಿದರು.

ತಾಲೂಕಿನ ಮಣೂರಿನ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ರೈತರು ಶೂನ್ಯ ಬಡ್ಡಿದರದಲ್ಲಿ ಪಿಕೆಪಿಎಸ್ ಹಾಗೂ ಡಿಸಿಸಿ ಬ್ಯಾಂಕಗಳಲ್ಲಿ ಸಾಲ ಪಡೆದುಕೊಂಡು ವೈಜ್ಞಾನಿಕ ಕೃಷಿ ಮಾಡಿಕೊಂಡಾಗ ಆರ್ಥಿಕ ಸಬಲರಾಗಲು ಸಾಧ್ಯವಾಗುತ್ತದೆ ಎಂದರು. ವೈಜ್ಞಾನಿಕ ಕೃಷಿ ಜೊತೆಗೆ ಹೈನುಗಾರಿಕೆಯಂತಹ ಕೆಲಸಗಳನ್ನು ಪ್ರತಿಯೊಬ್ಬರು ಮಾಡಬೇಕು ಎಂದರು.

ವಕೀಲ ಬಿ. ಕೆ. ಕಲ್ಲೂರ ಮಾತನಾಡಿ, ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಕಬ್ಬು ಬೆಳೆಯುತ್ತಿದ್ದಾರೆ. ಅದಕ್ಕೆ ನಾಗೋಡ ಗುಡ್ಡದ ಬಳಿಯಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸುವಂತೆ ಸಚಿವ ಶಿವಾನಂದ ಪಾಟೀಲ ಅವರಿಗೆ ಮನವಿ ಮಾಡಿದರು.

ಇದೇ ಸಮಯದಲ್ಲಿ ವೇದಿಕೆ ಮೇಲೆ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಈರಣ್ಣ ಪಟ್ಟಣಶೆಟ್ಟಿ ಸುರೇಶ ಹಾರಿವಾಳ, , ನೀಲು ನಾಯಕ, ಕಲ್ಲು ಸೊನ್ನದ, , ರಾಮನಗೌಡ ಪಾಟೀಲ, ಸಾಯಬಣ್ಣ ಗೊಳಸಂಗಿ, ರಾಘವೇಂದ್ರ ಲಮಾಣಿ ಯಲ್ಲಪ್ಪ ತಳವಾಡ , ಮಲ್ಲಿಕಾರ್ಜುನ್ ಜುಗತಿ ಬ್ಯಾoಕಿನ ಉಪಾಧ್ಯಕ್ಷ ಮಲ್ಲಪ್ಪ ಉಣ್ಣಿಭಾವಿ ಮತ್ತು ಅನೇಕ ಪೂಜ್ಯರು ಊರಿನ ಗುರು ಹಿರಿಯರು ಬ್ಯಾಂಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು

WhatsApp Group Join Now
Telegram Group Join Now
Share This Article
error: Content is protected !!