ಜೈಪುರ: ರಾಜಸ್ಥಾನದಲ್ಲಿ ದನ ಕಾಯುವವರಿಗೆ ರಾಜ್ಯ ಸರ್ಕಾರದಿಂದ ಮಾಸಿಕ 10,000 ಗೌರವಧನ ನೀಡುವ ವಿನೂತನ ಯೋಜನೆ ಆರಂಭಿಸಲಾಗಿದೆ.
ಇದರ ಅನ್ವಯ ಹಳ್ಳಿಗಳಲ್ಲಿ ಪ್ರತಿ 70 ದನಗಳಿಗೆ ಒಬ್ಬ ದನಗಾಹಿ ನೇಮಕ ಮಾಡಲಾಗುವುದು. ದನಗಳ ಸಂಖ್ಯೆ ಹೆಚ್ಚಾದಲ್ಲಿ ಎರಡರಿಂದ ಮೂರು ದನಗಾಹಿಗಳನ್ನು ನಿಯೋಜಿಸಲಾಗುವುದು.
ಇದರ ಅನ್ವಯ ಹಳ್ಳಿಗಳಲ್ಲಿ ಪ್ರತಿ 70 ದನಗಳಿಗೆ ಒಬ್ಬ ದನಗಾಹಿ ನೇಮಕ ಮಾಡಲಾಗುವುದು. ದನಗಳ ಸಂಖ್ಯೆ ಹೆಚ್ಚಾದಲ್ಲಿ ಎರಡರಿಂದ ಮೂರು ದನಗಾಹಿಗಳನ್ನು ನಿಯೋಜಿಸಲಾಗುವುದು.
ಇವರಿಗೆ ಮಾಸಿಕ 10 ಸಾವಿರ ರೂ. ಗೌರವಧನ ನೀಡಲಾಗುವುದು. ಈ ಹಣವನ್ನು ಸರ್ಕಾರ ನೇರವಾಗಿ ಭರಿಸುವುದಿಲ್ಲ. ದಾನಿಗಳು ಮತ್ತು ಸಾರ್ವಜನಿಕರ ನೆರವು ಪಡೆದು ಗೌರವಧನ ಭರಿಸಲಾಗುವುದು.
ಗ್ರಾಮೀಣ ಮಟ್ಟದಲ್ಲಿ ಸಂಘಟಿತ ಗೋಪಾಲನೆಯ ಪ್ರಾಚೀನ ಪದ್ಧತಿ ಪುನರುಜ್ಜೀವನಗೊಳಿಸಲು, ನಿರುದ್ಯೋಗ ನಿವಾರಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಉತ್ತಮ ವೇತನದಿಂದ ದನಗಾಹಿಗಳ ಜೀವನಮಟ್ಟ ಸುಧಾರಣೆಯಾಗಲಿದೆ ಎನ್ನಲಾಗಿದೆ.




