Ad imageAd image

ಸಾವಿನಲ್ಲೂ ಸಾರ್ಥಕತೆ : 12 ಜನರಿಗೆ ಅಂಗಾಂಗಗಳ ದಾನ

Bharath Vaibhav
ಸಾವಿನಲ್ಲೂ ಸಾರ್ಥಕತೆ : 12 ಜನರಿಗೆ ಅಂಗಾಂಗಗಳ ದಾನ
WhatsApp Group Join Now
Telegram Group Join Now

ಬೆಂಗಳೂರು/ ದಾವಣಗೆರೆ : ರಸ್ತೆ ಅಪಘಾತದಲ್ಲಿ ಭೀಕರವಾಗಿ ಗಾಯಗೊಂಡು ಮೃತಪಟ್ಟ ಯುವಕನ ಅಂಗಾಂಗದಾನದಿಂದ 12 ಮಂದಿಯ ಜೀವನ ಸುಗಮವಾಗಿದೆ. ದಾವಣಗೆರೆ ಮೂಲದ ದರ್ಶನ್‌ (29) ಈ ಹೆಗ್ಗಳಿಕೆಗೆ ಪಾತ್ರನಾಗಿದ್ದು, ತನ್ನ ಮರಣದ ನಂತರವೂ ದರ್ಶನ್‌ ಚಿರಕಾಲ ಜೀವಿಸಲಿದ್ದಾರೆ.

ದಾವಣಗೆರೆಯ ಹುಡಾಳು ಗ್ರಾಮದ ದರ್ಶನ್‌ ಮಾ.22 ರಂದು ಬೆಂಗಳೂರಿನ ನಾಯಂಡನ ಹಳ್ಳಿ ಬಳಿ ಅಪಘಾತವಾಗಿತ್ತು. ತೀವ್ರ ರಕ್ತಸ್ರಾವದಿಂದ ದರ್ಶನ್‌ ಮೆದುಳು ಮೃತ ಸ್ಥಿತಿಯಲ್ಲಿದೆ ಎಂದು ವೈದ್ಯರು ಘೋಷಿಸಿದ್ದರು.

ಈ ವೇಳೆ ಭಾವೋದ್ವೇಗಕ್ಕೆ ಒಳಗಾಗದ ಕುಟುಂಬಸ್ಥರು ಸಂತಾಪದಲ್ಲಿಯೂ ಸಹ ಅನುಕಂಪ, ಮಾನವೀಯ ಗುಣಗಳನ್ನು ಮೆರೆದಿದ್ದರು. ದರ್ಶನ್‌ ಅಂಗಾಂಗದಾನಕ್ಕೆ ಕುಟುಂಬಸ್ಥರು ಸಮ್ಮತಿಸಿದ್ದರು. ಇದು ದರ್ಶನ್‌ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

WhatsApp Group Join Now
Telegram Group Join Now
Share This Article
error: Content is protected !!