ಬೆಳಗಾವಿ: ಎರಡೂವರೆ ವರ್ಷ ಮುಖ್ಯಮಂತ್ರಿ ಅಂತ ತೀರ್ಮಾನ ಆಗಿಲ್ಲ. ಶಾಸಕರು 5 ವರ್ಷಕ್ಕೆ ಸಿಎಂ ಆಯ್ಕೆ ಮಾಡಿದ್ದಾರೆ. ನಾನು ಐದು ವರ್ಷಕ್ಕೆ ಸಿಎಂ ಆಯ್ಕೆಯಾಗಿದ್ದೇನೆ ಎಂಬುದಾಗಿ ಹೇಳುವ ಮೂಲಕ ಪಕ್ಷದೊಳಗಿನ ವಿರೋಧಿಗಳಿಗೂ ಸಿದ್ಧರಾಮಯ್ಯ ಗುನ್ನಾ ಹೊಡೆದಿದ್ದಾರೆ.
ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಚರ್ಚೆಗೆ ಉತ್ತರ ಕೊಡುತ್ತಲೇ ಬಿಜೆಪಿ ಸದಸ್ಯರ ಕಾಲೆಳೆಯುವ ಮಾತುಗಳಿಗೆ ಪ್ರತ್ಯುತ್ತರಿಸಿದಂತ ಸಿಎಂ ಸಿದ್ಧರಾಮಯ್ಯ ಅವರು, ಎಲ್ಲಿಯೂ ಎರಡೂವರೆ ವರ್ಷಕ್ಕೆ ಅಂತ ಹೇಳೇ ಇಲ್ಲ.ಆ ತೀರ್ಮಾನ ಆಗಿಲ್ಲ. ಈಗ ನಾನೇ ಮುಖ್ಯಮಂತ್ರಿ. ಮುಂದೆಯೂ ನಾನೇ ಇರುತ್ತೇನೆ ಎಂದರು.
ಈಗ ನಾನು ಮುಖ್ಯಮಂತ್ರಿಯಾಗಿದ್ದೇನೆ. ನನ್ನ ಪ್ರಕಾರ ಕಾಂಗ್ರೆಸ್ ಹೈಕಮಾಂಡ್ ನನ್ನ ಪರವಾಗಿಯೇ ಇದೆ. ಈಗಲೂ ನಾನೇ ಮುಖ್ಯಮಂತ್ರಿ, ಹೈಕಮಾಂಡ್ ಹೇಳೋವರೆಗೂ ನಾನೇ ಸಿಎಂ. ನನಗೆ ದೈಹಿಕ ನಿಶ್ಯಕ್ತಿ ಇರಬಹುದು, ಆದರೇ ರಾಜಕೀಯ ನಿಶ್ಯಕ್ತಿ ಇಲ್ಲ. ಜನರ ಆಶೀರ್ವಾದ ಇದ್ದರೇ ಮಾತ್ರ ಅಧಿಕಾರ ಇರುತ್ತದೆ.
ನಾನು ಹಣೆಯ ಬರಹದಲ್ಲಿ ನಂಬಿಕೆ ಇಟ್ಟಿದ್ದೇನೆ. ನಮಗೆ ಯಾರೂ ನಿರ್ದೇಶನ ಕೊಡೋರು ಇಲ್ಲ, ನಮಗೆ ನಾವೇ ನಿರ್ದೇಶಕರು. ನಾನೇ ಪ್ರೊಡ್ಯೂಸರ್, ನಾನೇ ಆಕ್ಟರ್ ಎಂಬುದಾಗಿ ಹೇಳುವ ಮೂಲಕ 2.5 ವರ್ಷದ ಬಳಿಕ ಅಧಿಕಾರ ಹಂಚಿಕೆ ಚರ್ಚೆಗೆ ಬ್ರೇಕ್ ಹಾಕಿದರು.




