ಚಿಕ್ಕೋಡಿ : MLC ಪ್ರಕಾಶ್ ಹುಕ್ಕೇರಿ ಮತ್ತು ಶಾಸಕ ಗಣೇಶ ಹುಕ್ಕೇರಿ ಇವರ ಪ್ರಯತ್ನದಿಂದ ಚಿಕ್ಕೋಡಿ ಪಟ್ಟಣದಲ್ಲಿ ವಿವಿಧ ಅವಿರುದ್ದಿ ಕುರಿತು 2.78 ಕೋಟಿ ರೂಪಾಯಿ ಮಂಜೂರು .
ಚಿಕ್ಕೋಡಿ ಪಟ್ಟಣದ ಭೀಮ ನಗರ, ಅಂಬೇಡ್ಕರ ನಗರ, ನಾಗಲಿಂಗೇಶ್ವರ ಕಾಲೋನಿ, ಜನತಾ ಕಾಲೋನಿಗಳಿಗೆ ವಿಧಾನ ಪರಿಷತ್ ಸದಸ್ಯ ಹಾಗೂ ಕರ್ನಾಟಕ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿಗಳಾದ ಮಾನ್ಯ ಶ್ರೀ ಪ್ರಕಾಶ ಬಾ ಹುಕ್ಕೇರಿ ಅವರಿಂದ ವಿವಿಧ ಅಭಿವೃದ್ಧಿ ಕಾಮಗಾರಿ ಪರಿಶೀಲನೆ.
ಚಿಕ್ಕೋಡಿ ಪಟ್ಟಣ ವ್ಯಾಪ್ತಿಯಲ್ಲಿ ಬರುವ ಭೀಮ ನಗರ, ಅಂಬೇಡ್ಕರ ನಗರ, ನಾಗಲಿಂಗೇಶ್ವರ ಕಾಲೋನಿ, ಜನತಾ ಕಾಲೋನಿಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ರೂ. 2.78 ಕೋಟಿ ಅನುದಾನ ಮಂಜೂರು ಮಾಡಲಾಗಿದೆ ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿಗಳಾದ ಶ್ರೀ ಪ್ರಕಾಶ ಬಾ ಹುಕ್ಕೇರಿರವರು ಸೋಮವಾರ ದಂದು ಚಿಕ್ಕೋಡಿ ಪಟ್ಟಣದ ಸದರ ವಿವಿಧ ವಾರ್ಡಗಳಿಗೆ ಬೇಟಿ ನೀಡಿ ಅಲ್ಲಿನ ಸಾರ್ವನಿಕರೊಂದಿಗೆ ಕಾಮಗಾರಿ ಕೈಗೊಳ್ಳುವ ಕುರಿತು ಚರ್ಚಿಸಿದರು ಶಾಸಕರಾದ ಮಾನ್ಯ ಶ್ರೀ ಗಣೇಶ ಪ್ರಕಾಶ ಹುಕ್ಕೇರಿ ಇವರ ವಿಶೇಷ ಪ್ರಯತ್ನದಿಂದ ಚಿಕ್ಕೋಡಿ ಪಟ್ಟಣದಲ್ಲಿ ಈಗಾಗಲೇ ಸುಮಾರು 40.00 ಕೋಟಿಗಳ ಅನುದಾನದಲ್ಲಿ ವಿವಿಧ ವಾರ್ಡಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.
ಚಿಕ್ಕೋಡಿ ಪಟ್ಟಣದಲ್ಲಿ ಹೊಸದಾಗಿ ಭೀಮ ನಗರದಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ರೂ. 1.00 ಕೋಟಿ, ಚಿಕ್ಕೋಡಿ ಪಟ್ಟಣದ ಭೀಮ ನಗರದ ಡಾ॥ ಬಾಬಾಸಾಹೇಬ
ಆಮಬೇಡ್ಕರರವರ ಪುತ್ಥಳಿಗೆ kಕಂಪೌಂಡ ಉಧ್ಯಾನವನ ದೀಪಾಲಂಕಾರ ಕಾಮಗಾರಿಗೆ ರೂ. 18.00 ಲಕ್ಷ ಚಿಕ್ಕೋಡಿ ಪಟ್ಟಣದ ಅಂಬೇಡ್ಕರ ನಗರದಲ್ಲಿ ರಸ್ತೆ & ಚರಮಡಿ ಕಾಮಗಾರಿಗೆ ರೂ. 50.00 ಲಕ್ಷ ಚಿಕ್ಕೋಡಿ ಪಟ್ಟಣದ ನಾಗಲಿಂಗೇಶ್ವರ ಕಾಲೋನಿಯಲ್ಲಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ರೂ. 50.00 ಲಕ್ಷ ಚಿಕ್ಕೋಡಿ ಪಟ್ಟಣದ ಜನತಾ ಕಾಲೋನಿಯಲ್ಲಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ರೂ. 50.00 ಲಕ್ಷ ಹಾಗೂ ಚಿಕ್ಕೋಡಿ ಪಟ್ಟಣದ ಗೊಂದಳಿ ಗಲ್ಲಿಯ ಶ್ರೀ ಮರಗುಬಾಯಿ ದೇವಸ್ಥಾನ ಪೂರ್ತಿಗೊಳಿಸಲು ರೂ. 10.00 ಲಕ್ಷಗಳ ಅನುದಾನ ಮಂಜುರು ಮಾಡಿದ್ದು, ಹೀಗೆ ಒಟ್ಟು 2.78 ಕೋಟಿಗಳ ಅನುದಾನ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು. ಈ ವೇಳೆ ಪುರಸಭೆ ಸದಸ್ಯರಾದ ಶಾಮ ರೇವಡೆ, ವಿನೋದ ಮಾಳಗೆ, ಶ್ರೀಮಂತ ಮಾಳಗೆ, ರಘು ಸನದಿ, ಶ್ರೀಶೈಲ ಆಸುದೆ, ಮುನಿರ ಮುಲ್ಲಾ, ಸಚಿನ ಘಟ್ಟಿ, ಜಿತೇಂದ್ರ ರಾಂಪೂರೆ, ಉದಯ ಖಾತೆದಾರ, ಉಮೇಶ ತಮ್ಮಣ್ಣವರ, ಅಮನ ಇಂಗಳೆ, ಶಬ್ಬಿರ ಮುಲ್ತಾನಿ, ರಾಮಾ ಗೊಂದಳಿ, ಮಲಿಕ ಮುಲ್ತಾನಿ, ವಿಕಾಸ ಭಂಡಾರಕರ. ಉದಯ ಹಿರೆಮಠ, ರಘು ಮಾಳಗೆ, ಇರ್ಪಾನ ಜಕಾತೆ, ಶಿವಾ ಮಾಳಿ, ಮನು ಎರಿಸ್ವಾಮಿ, ಶಿವಪ್ರಸಾದ ಕಲ್ಮಠ, ಹಾಗೂ ಪಟ್ಟಣದ ಸಾರ್ವಜನಿಕರು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಪುರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ರಾಜು ಮುಂಡೆ




