ಚಿಕ್ಕೋಡಿ : ನರೇಂದ್ರ ಮೋದಿಜೀ ಅವರ ನೇತೃತ್ವದ ಭಾರತ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2025-26 ರ ಕೇಂದ್ರ ಬಜೆಟ್ ಆರ್ಥಿಕ ಬೆಳವಣಿಗೆ, ಸಾಮಾಜಿಕ ಕಲ್ಯಾಣ ಮತ್ತು ತಾಂತ್ರಿಕ ಪ್ರಗತಿಗೆ ಮಾರ್ಗಸೂಚಿ ಕೃಷಿ, ಮೂಲಸೌಕರ್ಯ, ತೆರಿಗೆ ಪರಿಹಾರ ಮತ್ತು ಡಿಜಿಟಲ್ ರೂಪಾಂತರಕ್ಕೆ ಬಲವಾದ ಉತ್ತೇಜನದೊಂದಿಗೆ, ರಕ್ಷಣಾ ಆಧುನೀಕರಣ, ಸೈಬರ್ ಭದ್ರತೆ ಮತ್ತು ಬಾಹ್ಯಾಕಾಶ ಪರಿಶೋಧನೆಗೆ ಒತ್ತು ನೀಡಿದೆ. ರೈತರಿಗೆ ಹೆಚ್ಚಿನ ಸಾಲ, ಮಧ್ಯಮ ವರ್ಗದವರಿಗೆ ತೆರಿಗೆ ಕಡಿತ ಒಟ್ಟಾರೆಯಾಗಿ ಇದೊಂದು ದೇಶದ ಅತ್ಯುತ್ತಮ ಜನಪರ ಬಜೆಟ್ ಇದಾಗಿದೆ ಎಂದು ಹುಕ್ಕೇರಿ ಮಂಡಲ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀ ಸಂಗಮೇಶ ದುರದುಂಡಿ ಸಂತಸ ವ್ಯಕ್ತಪಡಿಸಿದ್ದಾರೆ..
ವರದಿ ರಾಜು ಮುಂಡೆ




