ಬಳ್ಳಾರಿ : ತೆಕ್ಕಲಕೋಟೆ ಪಟ್ಟಣದ ಗೌಡ್ರಮೂಲೆ ಬೆಟ್ಟದಲ್ಲಿ ನಡೆಯುತ್ತಿರುವ ಉತ್ಖನನ ಸ್ಥಳದಲ್ಲಿ ಶನಿವಾರ 3,500 ದಿಂದ 5,000 ವರ್ಷಗಳ ಹಿಂದಿನದ್ದು ಎನ್ನಲಾದ, ಆದಿಮಾನವನ ಮತ್ತೊಂದು ಅಸ್ಥಿಪಂಜರ ದೊರೆತಿದೆ. ಸೂಕ್ಷ್ಮ ಶಿಲಾಯುಗದ ಪರಿಕರಗಳೂ ಪತ್ತೆ ಆಗಿವೆ.
‘ಕೆಲ ದಿನಗಳ ಹಿಂದೆಯಷ್ಟೇ ಅಸ್ಥಿಪಂಜರ ಕಂಡುಬಂದಿತ್ತು. ಈಗ ಮತ್ತೊಂದು ಸಿಕ್ಕಿದೆ. ಎದೆಯ ಭಾಗದ ಮೇಲೆ ದೊಡ್ಡಗಾತ್ರದ ಕಲ್ಲು ಇರಿಸಿ ಸಮಾಧಿ ಮಾಡಲಾಗಿದೆ.




