ಉತ್ತರ ಪ್ರದೇಶ : ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಭಾಗಿಯಾಗಿ ಸಮೀಪದ ಕಾಶಿಗೆ ತೆರಳುವಾಗ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೀದರ್ ಮೂಲದ ಒಂದೇ ಕುಟುಂಬದ ಆರು ಮಂದಿ ದುರಂತ ಸಾವಿಗೀಡಾಗಿದ್ದಾರೆ.
ಮೃತರನ್ನು ಸುನೀತಾ (35), ಸಂತೋಷ್ (43), ನೀಲಮ್ಮ (60), ಗಣೇಶ ಹಾಗೂ ಶಿವು ಗುರುತಿಸಲಾಗಿದೆ.ಈ ಅವಘಡದಲ್ಲಿ ಒಂದು ಮಗು ಕೂಡ ಮೃತಪಟ್ಟಿದೆ.
ಬೀದರ್ನಿಂದ ಪ್ರಯಾಗ್ರಾಜ್ಗೆ ಕ್ರೂಸರ್ನಲ್ಲಿ 14 ಜನ ತೆರಳಿದ್ದರು. ಕುಂಭಮೇಳವನ್ನು ಮುಗಿಸಿಕೊಂಡು ಕಾಶಿ ಕಡೆಗೆ ತೆರಳುತ್ತಿದ್ದ ವೇಳೆ ಮಿರಾಜ್ ಪುರ್ ಬಳಿ ಕ್ರೂಸರ್ ಮತ್ತು ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ.
ಮೃತರು ಬೀದರ್ನ ಲಾಡಗೇರಿ ಬಡಾವಣೆಯ ನಿವಾಸಿಗಳು. ಅಪಘಾತದಲ್ಲಿ ಏಳು ಜನ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.