Ad imageAd image

ಬಸವನಗೌಡ ಪಾಟೀಲ್ ಯತ್ನಾಳ 65ನೇ ಹುಟ್ಟುಹಬ್ಬ ಆಚರಣೆ

Bharath Vaibhav
ಬಸವನಗೌಡ ಪಾಟೀಲ್ ಯತ್ನಾಳ 65ನೇ ಹುಟ್ಟುಹಬ್ಬ ಆಚರಣೆ
WhatsApp Group Join Now
Telegram Group Join Now

ಚಿಂಚೋಳಿ: ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸಿದ್ದ ಸಿರಿ ಕಾರ್ಖಾನೆಯ ಮಾಲೀಕರಾದ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಹುಟ್ಟುಹಬ್ಬವನ್ನು ಕಾಳಗಿ ಹಾಗೂ ಚಿಂಚೋಳಿ ತಾಲೂಕಿನ ರೈತ ಸಂಘ ವತಿಯಿಂದ ಹುಟ್ಟುಹಬ್ಬವನ್ನು ರಟ್ಗಲ್ ಗ್ರಾಮದಲ್ಲಿ ಆಚರಿಸಲಾಯಿತು. ಶ್ರೀ ರೇವಣಸಿದ್ದೇಶ್ವರ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಪೆನ್ನು ಹಾಗೂ ನೋಟ್ ಬುಕ್ ವಿತರಣೆ ಮಾಡಲಾಯಿತು ಅದರ ಜೊತೆಗೆ ಕಾಳಗಿ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ಮತ್ತು ಮೊಟ್ಟೆ ವಿತರಣೆ ಮಾಡಲಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯ ಪೂಜ್ಯಶ್ರೀ ರೇವಣಸಿದ್ಧ ಶಿವಾಚಾರ್ಯರು ಅಧ್ಯಕ್ಷತೆ ಶಿವರಾಜ್ ಪಾಟೀಲ್ ಗೊಣಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಈ ಸಂದರ್ಭದಲ್ಲಿ ವೀರಣ್ಣ ಗಂಗಾಣಿ , ಮುಖ್ಯ ಗುರುಗಳಾದ ಲಕ್ಷ್ಮಣ ದೇಸಾಯಿ, ಶಿವರಾಜ್ ಪಾಟೀಲ್ ಗೋಣಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ನಾಗಯ್ಯ ಸಾಲಿಮಠ, ಶರಣು ಸೀಗಿ, ವೀರೇಶ್ ಬುಕ್ಕಟಿಗಿ, ವಿಜಯ್ ಕುಮಾರ್ ಜಡಗಿ, ರಮೇಶ ಸಿದ್ದನಾಕ, ಮಲ್ಲು ಹೂಗಾರ, ಜಗ್ಗು ಹೆಬ್ಬಾಳ, ನಿರೂಪಣೆ ಮಲ್ಲಯ್ಯ ಮಾಸ್ಟರ್ ಕಿಣಿ,ಸರಕಾರಿ ಪ್ರಾಥಮಿಕ ಶಾಲೆ ರಟಕಲ್, ಮುಖ್ಯ ಗುರುಗಳಾದ, ಅಹಮದ ಖಾನ, ಸಹ ಶಿಕ್ಷಕರಾದ ಶಿವಲಿಂಗಪ್ಪ ಸರ್, ಸಿ ಆರ್ ಸಿ ಗಳಾದ ದಯಾನಂದ ಹುಲಸುಗೂಡ, ಅತಿಥಿ ಶಿಕ್ಷಕರದ ಭೀಮರಾವ್ ಕುಡ್ದಳ್ಳಿ ಮತ್ತು ಸಹ ಶಿಕ್ಷಕಿಯರಿದ್ದರು. ಮತ್ತು ನೂರಾರು ಮುದ್ದು ಮಕ್ಕಳು ಇದ್ದರು. ಹಾಗೂ ಕಾಳಗಿ ಪಟ್ಟಣದ ಸರಕಾರಿ ಆಸ್ಪತ್ರಯಲಿ ಹಲವಾರು ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲು ಸಹಕರಿಸಿದ. ಡಾ.ವೈಶಾಲಿ ಎಸ್ ಕೆ, ಮಾದೇವಿ ಟಾಪ್ ನರ್ಸ್ ಹಾಗೂ ಮುಖಂಡರಾದ ಸುಂದರ್ ಡಿ ಸಾಗರ, ಪ್ರದೀಪ್ ಪಾಟೀಲ, ದೇವಿಂದ್ರ ಕದಂ ಕಾಳಗಿ ತಿಮ್ಮಯ್ಯ ಆರ್ ಒಡೆಯರಾಜ, ಕರಣ ರಾಜಪುರ,ಸುಭಾಷ್ ಕಾಳಗಿ, ಸಿದ್ದು ರಾಮನ, ಇನ್ನು ಅನೇಕ ಸಂಘಟನಾ ಪದಾಧಿಕಾರಿಗಳು ಮತ್ತು ಅಭಿಮಾನಿಗಳು ಇದ್ದರು.

ವರದಿ: ಸುನಿಲ್ ಸಲಗರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!