Ad imageAd image

ನ್ಯಾಯಾಲಯಗಳು ಸಾರ್ವಜನಿಕರಿಗೆ,ದೇವಾಲಯಗಳು ಇಂದಂತೆ,

Bharath Vaibhav
ನ್ಯಾಯಾಲಯಗಳು ಸಾರ್ವಜನಿಕರಿಗೆ,ದೇವಾಲಯಗಳು ಇಂದಂತೆ,
WhatsApp Group Join Now
Telegram Group Join Now

ಇಲಕಲ್:-  ನ್ಯಾಯಾಲಯಗಳು ಸಾರ್ವಜನಿಕರ ದೇವಾಲಯಗಳು ಇಂದಂತೆ, ಅಲ್ಲಿ ಬರುವವರಿಗೆ ಮತ್ತು ವಕೀಲರಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಕಕ್ಷಿದಾರರು  ಕುಳಿತುಕೊಳ್ಳುವುದಕ್ಕೆ ಬೆಂಚು, ಇನ್ನಿತರ ಮೂಲಭೂತ
ಸೌಕರ್ಯಗಳನ್ನು ನೀಡಬೇಕಾದ ಸರಕಾರ , ಇನ್ನುವರೆಗಾದರೂ ಕೂಡಾ ಕೊಟ್ಟಿಲ್ಲ, ಅಲ್ಲಿ ಬರುವ ಸಾರ್ವಜನಿಕರಿಗೆ ತೊಂದರೆಯಾಗಿದೆ

ಎಂದು ಅಖಿಲ ಕರ್ನಾಟಕ ರೈತ ಸಂಘದ ಬಾಗಲಕೋಟೆ ಜಿಲ್ಲಾಅಧ್ಯಕ್ಷ ನಾಗರಾಜ ಹೂಗಾರ ಮತ್ತು ಸಂಘದ ಸದಸ್ಯರು ಹುನಗುಂದ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು, ಇದೇ ಸಂದರ್ಭದಲ್ಲಿ ದಿನಾಂಕ: 18-04-2024 ರಂದು ಹುಬ್ಬಳ್ಳಿಯ ಪ್ರತಿಷ್ಠಿತ ಬಿವಿಬಿ ಕಾಲೇಜಿನಲ್ಲಿ ಕ್ಲಾಸ್ ಮುಗಿಸಿ ಹೊರಗಡೆ ಬರುತ್ತಿದ್ದಂತೆ

ವಿದ್ಯಾರ್ಥಿನಿಯಾದ ನೇಹಾ ಹಿರೇಮಠರನ್ನು ಕಾಲೇಜು ಆವರಣದಲ್ಲಿ ಫಯಾಜ್ ಎಂಬ ಯುವಕ ಚಾಕುವಿನಿಂದ ಬರ್ಬರವಾಗಿ 9 ಸಲ ಚುಚ್ಚಿ ಕೊಲೆಗೈದ ಆರೋಪಿಯನ್ನು ತಕ್ಷಣ ಆರೋಪಿತನಿಗೆ  ಸೂಕ್ತವಾದ ಕಾನೂನಿನ ಚೌಕಟ್ಟಿನಲ್ಲಿ ಗಲ್ಲಿಗೇರಿಸಬೇಕು ಮತ್ತು ಕೊಲೆಯಾದ ನೇಹಾ ಹಿರೇಮಠ ಇವರ ಕುಟುಂಬದವರಿಗೆ ನ್ಯಾಯವನ್ನು
ಒದಗಿಸಿಕೊಡಬೇಕೆಂದು ರಾಜಪಾಲರಿಗೆ ಮನವಿ ಸಲ್ಲಿಸಿದರು.

ವರದಿ ದಾವಲ್. ಶೇಡಂ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!