Ad imageAd image

ಡೆಹ್ರಾಡೂನ್ ಗೆ ಚಾರಣಕ್ಕೆ ತೆರಳಿದ್ದಂತ 9 ಕನ್ನಡಿಗರು ದುರ್ಮರಣ : ಕೃಷ್ಣ ಬೈರೇಗೌಡ ಮಾಹಿತಿ 

Bharath Vaibhav
ಡೆಹ್ರಾಡೂನ್ ಗೆ ಚಾರಣಕ್ಕೆ ತೆರಳಿದ್ದಂತ 9 ಕನ್ನಡಿಗರು ದುರ್ಮರಣ : ಕೃಷ್ಣ ಬೈರೇಗೌಡ ಮಾಹಿತಿ 
WhatsApp Group Join Now
Telegram Group Join Now

ಬೆಂಗಳೂರು: ಕರ್ನಾಟಕದಿಂದ ಉತ್ತರಾಖಂಡದ ಡೆಹ್ರಾಡೂನ್ ಗೆ ಚಾರಣಕ್ಕೆ ತೆರಳಿದ್ದಂತ 9 ಕನ್ನಡಿಗರು ಹವಾಮಾನ ವೈಪರಿತ್ಯದಿಂದ ದುರ್ಮರಣಕ್ಕೆ ಒಳಗಾಗಿದ್ದಾರೆ ಅಂತ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ.

ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ನಾನು ಈಗ ಡೆಹ್ರಾಡೂನ್ ನ ರಾಜ್ಯ ಅತಿಥಿ ಗೃಹದಲ್ಲಿರುವ 8 ಜನರ ಗುಂಪನ್ನು ಭೇಟಿಯಾಗಿ ಸಂವಾದ ನಡೆಸಿದ್ದೇನೆ.

ಅವರೆಲ್ಲರೂ ಸಾಮಾನ್ಯ ಆರೋಗ್ಯದಲ್ಲಿದ್ದಾರೆ. ಹವಾಮಾನಕ್ಕೆ ಒಳಪಟ್ಟು ಇನ್ನೂ ಐದು ಜನರು ಡೆಹ್ರಾಡೂನ್ ತಲುಪಲಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ವಿವಿಧ ಅಧಿಕಾರಿಗಳೊಂದಿಗೆ ನಾನು ಚರ್ಚಿಸಿದ್ದೇನೆ ಎಂದು ತಿಳಿಸಿದ್ದಾರೆ.

ಹವಾಮಾನ ವೈಪರಿತ್ಯದ ಕಾರಣಕ್ಕಾಗಿ ಕರ್ನಾಟಕದ 9 ಮಂದಿ ಸಾವನ್ನಪ್ಪಿದ್ದಾರೆ. ಎಲ್ಲಾ 9 ಶವಗಳನ್ನು (ಪ್ರಸ್ತುತ ಉತ್ತರಕಾಶಿಯಲ್ಲಿ 5 ಮತ್ತು ಇನ್ನೂ ಚಾರಣ ಮಾರ್ಗದಲ್ಲಿ 4) ಡೆಹ್ರಾಡೂನ್ಗೆ ಸಾಗಿಸಲು ನಾವು ಸ್ಥಳೀಯ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ. ಸಾಧ್ಯವಾದಷ್ಟು ಬೇಗ ಶವಗಳನ್ನು ಬೆಂಗಳೂರಿಗೆ ಸಾಗಿಸಲು ನಾವು ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!