Ad imageAd image

ಅನಧಿಕೃತ ಎರಡು ಶಾಲೆಗಳ ಮಾನ್ಯತೆ ರದ್ದು

Bharath Vaibhav
ಅನಧಿಕೃತ ಎರಡು ಶಾಲೆಗಳ ಮಾನ್ಯತೆ ರದ್ದು
WhatsApp Group Join Now
Telegram Group Join Now

ಇಳಕಲ್ : -ಗಂಗೂರ ಶರಣು ಮಹಾಂತೇಶ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ನಗರದಲ್ಲಿ ನಡೆಯುತ್ತಿದ್ದ ಎರಡು ಪ್ರಾಥಮಿಕ ಶಾಲೆಗಳ ಮಾನ್ಯತೆಯನ್ನು ಬಾಗಲಕೋಟ ಜಿಲ್ಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬಿ ಕೆ ನಂದನೂರ ರದ್ದುಗೊಳಿಸಿದ್ದಾರೆ.
ಈ ಸಂಸ್ಥೆ ನಡೆಸುತ್ತಿದ್ದ ಪ್ರೇರಣಾ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಮತ್ತು ಬಸವಶ್ರೀ ಇಂಗ್ಲೀಷ್ ಮಾಧ್ಯಮ ಪ್ರಾಥಮಿಕ ಶಾಲೆಯು ಇಲಾಖೆಗೆ ಯಾವುದೇ ಸೂಚನೆ ನೀಡದೇ ಸ್ಥಳಾಂತರ ಮಾಡಿದ್ದಾರೆ

ಎಂದು ಉದಯಕುಮಾರ ವದ್ದಿ ಯವರು ಆರೋಪಿಸಿದ್ದರು, ಈ ಹಿನ್ನೆಲೆಯಲ್ಲಿ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸಿ ವರದಿ ಒಪ್ಪಿಸಿದರು, ವರದಿ ಆಧರಿಸಿ ಈ ಎರಡೂ ಶಾಲೆಗಳ ಮಾನ್ಯತೆಯನ್ನು ರದ್ದುಗೊಳಿಸಲಾಯಿತು ಎಂದು ಅವರು ನೀಡಿದ ಲಿಖಿತ ಆದೇಶದಲ್ಲಿ ತಿಳಿಸಲಾಗಿದೆ.ಈ ಎರಡು ಶಾಲೆಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳನ್ನು ಸರಕಾರಿ ಶಾಲೆಗಳಲ್ಲಿ ಪ್ರವೇಶ ಮಾಡಿಸಬೇಕು ಎಂದು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅವರು ಸಲಹೆ ನೀಡಿದ್ದಾರೆ.

ವರದಿ ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!