Ad imageAd image

ಮತ್ತೆ ಎಂಟು ಜನ ಐಎಎಸ್ ಅಧಿಕಾರಿಗಳ ವರ್ಗಾವಣೆ 

Bharath Vaibhav
ಮತ್ತೆ ಎಂಟು ಜನ ಐಎಎಸ್ ಅಧಿಕಾರಿಗಳ ವರ್ಗಾವಣೆ 
vidhana soudha
WhatsApp Group Join Now
Telegram Group Join Now

ಬೆಂಗಳೂರು : ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಕೆಲಸ ಮಾಡಲಾಗಿದೆ. ಎಂಟು ಮಂದಿ ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.

ಕರ್ನಾಟಕ ಆಡಳಿತ ಸೇವೆಗೆ ಸೇರಿದ ಈ ಕೆಳಕಂಡ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ವರ್ಗಾಯಿಸಿ / ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.

ವರ್ಗಾವಣೆಗೊಂಡ ಐಎಎಸ್‌ ಅಧಿಕಾರಿಗಳು

ಯಶವಂತ್ ವಿ ಗುರುಕಾರ್-ಜಿಲ್ಲಾಧಿಕಾರಿ, ರಾಮನಗರ

ಡಾ. ಹರೀಶ್‌ಕುಮಾರ್- ವಿಶೇಷ ಆಯುಕ್ತ, ತ್ಯಾಜ್ಯ ನಿರ್ವಹಣೆ, ಬಿಬಿಎಂಪಿ, ಬೆಂಗಳೂರು (ಸಿಇಒ, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಲಿ. ಹೆಚ್ಚುವರಿ ಹೊಣೆ)

ಅರ್ಚನಾ ಎಂ.ಎಸ್- ನಿರ್ದೇಶಕರು, ಸೆಕ್ಯೂರಿಟಿ ಅಂಡ್ ವಿಜಿಲೆನ್ಸ್, ಬಿಎಂಟಿಸಿ, ಬೆಂಗಳೂರು.

ಡಾ. ಅರವಿಂದ ಮೆನನ್ ರಾಜೇಂದ್ರನ್- ವಿಶೇಷ ಆಯುಕ್ತ, ಆಡಳಿತ, ಬಿಬಿಎಂಪಿ, ಬೆಂಗಳೂರು

ಮೊಹಮ್ಮದ್ ಇಕ್ರಾಮುಲ್ಲಾ ಷರೀಪ್‌- ಉಪ ಕಾರ್ಯದರ್ಶಿ, ಆಯವ್ಯಯ ಮತ್ತು ಸಂಪನ್ಮೂಲ, ಹಣಕಾಸು ಇಲಾಖೆ, ಬೆಂಗಳೂರು

ವರ್ನಿತ್ ನೇಗಿ- ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮ, ಬೆಂಗಳೂರು.

ಮೋನಾ ರೋಟ್-ಸಿಇಒ, ಜಿಪಂ, ಚಾಮರಾಜನಗರ.

ಆನಂದ ಪ್ರಕಾಶ್ ಮೀನಾ-ಸಿಇಒ, ಜಿಪಂ, ಕೊಡಗು.

 

 

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!