Ad imageAd image

ಸಿಎಂ – ಡಿಸಿಎಂ ವಿಚಾರ ಹಾದಿ ಬೀದಿಯಲ್ಲಿ ಮಾತನಾಡುವುದಲ್ಲ : ಆರ್. ಬಿ ತಿಮ್ಮಾಪುರ

Bharath Vaibhav
ಸಿಎಂ – ಡಿಸಿಎಂ ವಿಚಾರ ಹಾದಿ ಬೀದಿಯಲ್ಲಿ ಮಾತನಾಡುವುದಲ್ಲ : ಆರ್. ಬಿ ತಿಮ್ಮಾಪುರ
WhatsApp Group Join Now
Telegram Group Join Now

ಹುಬ್ಬಳ್ಳಿ: ಮಾಧ್ಯಮಗಳಲ್ಲೇ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಚರ್ಚೆ ಮಾಡುತ್ತಿದ್ದಾರೆ. ಇದು ಹಾದಿ ಬೀದಿಯಲ್ಲಿ ಚರ್ಚೆ ಆಗುವ ವಿಷಯವಲ್ಲ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಮತ್ತು ಡಿಸಿಎಂ ಸ್ಥಾನ ವಿಚಾರವಾಗಿ ಮಾಧ್ಯಮಗಳಲ್ಲಿ ನೋಡುತ್ತಿದ್ದೇನೆ.ಇದಕ್ಕಾಗಿಯೇ ಒಂದು ರೂಪುರೇಷೆ ಇದೆ.‌ ಪಕ್ಷದ ಹೈಕಮಾಂಡ್, ಸಿಎಲ್‌ಪಿ ಇದೆ ಎಂದರು.

ಎಸ್‌ಸಿ, ಎಸ್‌ಟಿ ಅನುದಾನ ದುರ್ಬಳಕೆ ಆಗುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾವುದೇ ಕಾರಣಕ್ಕೂ ದುರ್ಬಳಕೆ ಆಗುತ್ತಿಲ್ಲ. ವಾಸ್ತವಿಕತೆ ನೋಡಬೇಕು. ಲೋಕೋಪಯೋಗಿ ರಸ್ತೆ ಹೇಗೆ ಆಗಿವೆ ಎಂದು ಪ್ರಶ್ನಿಸಿದರು.

ಹಿಂದುಳಿದ ಜನಾಂಗಕ್ಕೆ ಸಹಾಯ ಮಾಡುವ ಪ್ರವೃತ್ತಿ ಮುಖ್ಯಮಂತ್ರಿಗಳಲ್ಲಿ ಇದೆ. ಯಾವುದೇ ರೀತಿಯ ಹಿಂದುಳಿದ ವರ್ಗಗಳಿಗೆ ಅನ್ಯಾಯ ಆಗಿಲ್ಲ.‌ಸಿಎಂ ಅವರೇ ತಂದ ಕಾನೂನು ಹೆಚ್ಚಿಗೆ ಅನುದಾನ ಕೊಡುತ್ತಾ ಇದ್ದಾರೆ. ಇದರಲ್ಲಿ ಹುಳುಕು ನೋಡುತ್ತಾ ಇದ್ದಾರೆ ಎಂದರು.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!