Ad imageAd image

ಎದ್ದೇಳಿ ಸಿದ್ದರಾಮಯ್ಯನವರೇ : ಬಿಜೆಪಿ ಪೋಸ್ಟರ್ ವೈರಲ್ 

Bharath Vaibhav
ಎದ್ದೇಳಿ ಸಿದ್ದರಾಮಯ್ಯನವರೇ : ಬಿಜೆಪಿ ಪೋಸ್ಟರ್ ವೈರಲ್ 
WhatsApp Group Join Now
Telegram Group Join Now

ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ, ಇಲಿ ಜ್ವರ ಪ್ರಕರಣಗಳು ಹೆಚ್ಚುತ್ತಿದ್ದು, ಶಾಂತಿ ನೆಮ್ಮದಿ ಹಾಗೂ ಸಮೃದ್ಧಿಯ ನಾಡಾಗಿದ್ದ ಕರ್ನಾಟಕ ಈಗ ಅನಾರೋಗ್ಯದ ಬೀಡಾಗಿದೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದೆ.

ಒಂದೆಡೆ ಅತಿವೃಷ್ಟಿ ಮತ್ತೊಂದೆಡೆ ಅನಾವೃಷ್ಟಿಯ ಜೊತೆ ಡೆಂಗ್ಯೂವಿನಂತಹ ಸಾಂಕ್ರಾಮಿಕ ರೋಗ ಕನ್ನಡಿಗರನ್ನು ಬಾಧಿಸುತ್ತಿದ್ದರೂ ಸಿದ್ದರಾಮಯ್ಯ ಅವರ ಸರ್ಕಾರ ಗಾಢ ನಿದ್ರೆಯಲ್ಲಿದೆ.

ಎದ್ದೇಳಿ ಸಿದ್ದರಾಮಯ್ಯನವರೇ ಎಂದು ಬಿಜೆಪಿ ಸೋಷಿಯಲ್ ಮೀಡಿಯಾದಲ್ಲಿ ನಿದ್ದೆಯಲ್ಲಿರುವ ಸಿಎಂ ಪೋಸ್ಟರ್ ಬಿಡುಗಡೆ ಮಾಡಿದೆ.ನಿಮ್ಮ ಸರ್ಕಾರ ಎಚ್ಚೆತ್ತು ಜನರ ಸಂಕಷ್ಟಕ್ಕೆ ಧಾವಿಸುವುದು ಯಾವಾಗ ಎಂಬುದನ್ನು ತಿಳಿಸುವಿರಾ ಕಾಂಗ್ರೆಸ್ಸಿಗರೇ!? ಎಂದು ಪ್ರಶ್ನಿಸಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!