Ad imageAd image

ರಾಹುಲ್ ಗಾಂಧಿ ಯುವಜನತೆಯ ಕ್ಷಮೆ ಕೇಳಬೇಕು

Bharath Vaibhav
ರಾಹುಲ್ ಗಾಂಧಿ ಯುವಜನತೆಯ ಕ್ಷಮೆ ಕೇಳಬೇಕು
WhatsApp Group Join Now
Telegram Group Join Now

ಬೆಳಗಾವಿ :ಭಾರತೀಯ ಜನತಾ ಪಾರ್ಟಿ ಬೆಳಗಾವಿ ವತಿಯಿಂದ ಬೆಳಗಾವಿ ನಗರದ ಸರ್ಕಿಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಕುಮಾರ್ ಹಿರೇಮಠ ಅವರು ಮಾತನಾಡಿ ಲೋಕಸಭೆ ಪ್ರತಿಪಕ್ಷ ರಾಹುಲ್ ಗಾಂಧಿಯವರು ಅಗ್ನಿಪಥಯೋಜನೆಕುರಿತು ಹಗುರವಾಗಿಮಾತನಾಡಿದ್ದು, ಇದು ಸೈನಿಕರಿಗೆಮಾಡಿದ ಅವಮಾನವಾಗಿದೆ. ಕೂಡಲೆ ಅವರು ಯುವಜನತೆಯ ಕ್ಷಮೆ ಕೇಳಬೇಕು ,ಅಗ್ನಿಪಥಯೋಜನೆಯು ಭಾರತದ ಸೈನ್ಯವನ್ನುಬಲಪಡಿಸುವ ಹಾಗೂ ದೇಶ ಕಾಪಾಡುವದೇಶ ಸೇವೆಯೇ ಪರಮೋಚ್ಛಎಂದು ಬಿಂಬಿಸುವ ಯೋಜನೆಯಾಗಿದೆ. ಆದರೆ, ಕಾಂಗ್ರೆಸ್ಸಿಗರು ಅದರಲ್ಲೂ ರಾಹುಲ್  ಗಾಂಧಿಯವರು ಈಯೋಜನೆ ಬಗ್ಗೆ ಅಪಪ್ರಚಾರಮಾಡುತ್ತಿದ್ದಾರೆ ಎಂದು ದೂರಿದರು.ಪ್ರಧಾನಿ ಮೋದಿಯವರು ಭಾರತೀ
ಯ ಸೈನ್ಯಕ್ಕೆ ಬಲ ತುಂಬುತ್ತಿದ್ದಾರೆ.ಸೈನಿಕರಿಗೆ ಎಲ್ಲಾ ಸೌಕರ್ಯಗಳನ್ನುಒದಗಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿಯುವ ಸೈನಿಕರು ಹೆಚ್ಚಾಗಬೇಕು ಎಂಬಉದ್ದೇಶದಿಂದ ಅಗ್ನಿಪಥ ಯೋಜನೆಜಾರಿಗೆ ತಂದಿದ್ದಾರೆ. ಈಗಾಗಲೇಸುಮಾರು 80 ಸಾವಿರ ಯುವಕರು ಈಯೋಜನೆಯಡಿ ದೇಶ ಸೇವೆಮಾಡುತ್ತಿದ್ದಾರೆ ಎಂದರು.-18 ವರ್ಷ ಮೇಲ್ಪಟ್ಟವರು, ಈಯೋಜನೆಯಡಿ ಸೈನ್ಯಕ್ಕೆಸೇರಬಹುದು.
ತರಬೇತಿಗಾಗಿಯೇ – 1ಕೋಟಿಗೂ ಅಧಿಕ ಹಣವನ್ನು ಖರ್ಚುಮಾಡಲಾಗುತ್ತಿದೆ. ಅಗ್ನಿಪಥಯೋಜನೆಇದೊಂದು ದೇಶದ ಸೇವೆ ಜೊತೆಗೆಯುವಕರಲ್ಲಿ ಆರ್ಥಿಕ ಬಲ ತುಂಬುವಮಹತ್ವದ ಯೋಜನೆ ಯಾಗಿದೆ ಎಂದುತಿಳಿಸಿದರು.

ಯುವಕರಿಗೆ ಆಸರೆಯಾಗಿರುವ, ದೇಶ ಪ್ರೇಮ ಬೆಳೆಸುವ ಯೋಜನೆ ಕುರಿತು ಕಾಂಗ್ರೆಸ್‌ ಮುಖಂಡರುಹಗುರವಾಗಿ ಮಾತನಾಡುತ್ತಿದ್ದು,ಸರಿಯಲ್ಲ ಎಂದರು. ಈ ಸಂದರ್ಭದಲ್ಲಿ ಭಾ.ಜ.ಪಾ ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ಮಹೇಶ್ ಮೋಹಿತೆ,ಜಿಲ್ಲಾ ಮಾಧ್ಯಮ ಪ್ರಮುಖ ಸಚಿನ್ ಕಡಿ, ಸಹ ಪ್ರಮುಖ ಬಾಳೇಶ್ ಚವ್ವನ್ನವರ,ಮಾಜಿ ಸೈನಿಕರ ಒಕ್ಕೂಟದಬೆಳಗಾವಿ ಗ್ರಾಮಂತರ ತಾಲೂಕಾ ಅಧ್ಯಕ್ಷ ರಮೇಶ ಚೌಗಲಾ, ಜಗದೀಶ್ ಪೂಜೇರಿ,ಭಾ.ಜ.ಪಾ ಕಾರ್ಯಾಲಯ ಕಾರ್ಯದರ್ಶಿ ವಿಠ್ಠಲ್ ಸಾಯಣ್ಣವರ,ಲಕ್ಷ್ಮಣ ದಂಡಾಪುರೆ, ರಾಜೇಂದ್ರ ಹಲಗಿ,ಶಿವಾಜಿ ಕದಂ,ಸಂಗಪ್ಪ ಮೇಟಿ, ವಿಲಾಸ್ ಜಾಂಗಳೆ ಹಾಗೂ ಅನೇಕರು ಉಪಸ್ಥಿತರಿದ್ದರು

ವರದಿ: ಪ್ರತೀಕ ಚಿಟಗಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!