Ad imageAd image

ಬಿಜೆಪಿ ನಡೆಸುತ್ತಿರುವುದು ಪಾದಯಾತ್ರೆಯಲ್ಲ, ಪಾಪದ ಯಾತ್ರೆ : ಕಾಂಗ್ರೆಸ್ ವಾಗ್ದಾಳಿ 

Bharath Vaibhav
ಬಿಜೆಪಿ ನಡೆಸುತ್ತಿರುವುದು ಪಾದಯಾತ್ರೆಯಲ್ಲ, ಪಾಪದ ಯಾತ್ರೆ : ಕಾಂಗ್ರೆಸ್ ವಾಗ್ದಾಳಿ 
CONGRESS
WhatsApp Group Join Now
Telegram Group Join Now

ಬೆಂಗಳೂರು : ಬಿಜೆಪಿ ನಡೆಸುತ್ತಿರುವುದು ಪಾದಯಾತ್ರೆಯಲ್ಲ, ಪಾಪದ ಯಾತ್ರೆ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ವಾಗ್ದಾಳಿ ನಡೆಸಿದೆ.

ಬಿಜೆಪಿಯದ್ದು ಪಾದಯಾತ್ರೆಯಲ್ಲ, ಪಾಪದ ಯಾತ್ರೆ! ಭ್ರಷ್ಟಾಚಾರದ ಪಾಪದ ಕೊಡ ತುಂಬಿರುವ ಬಿಜೆಪಿ ಜನರ ಪರವಾಗಿರುವ ವಿಷಯಗಳ ಬಗ್ಗೆ ಕಾಳಜಿ ಇದ್ದಿದ್ದೇ ಆದರೆ ಕೇಂದ್ರ ಸರ್ಕಾರದ ಸರಣಿ ಅನ್ಯಾಯಗಳ ವಿರುದ್ಧ ಪಾದಯಾತ್ರೆ ಮಾಡಿ ಜನರಿಂದ ಭೇಷ್ ಎನಿಸಿಕೊಳ್ಳಲಿ.

ಸಬ್ ಅರ್ಬನ್ ರೈಲು ಯೋಜನೆಯಲ್ಲಿ ರೈಲು ಬಿಟ್ಟಿರುವ ಕೇಂದ್ರ ಸರ್ಕಾರದ ಅನ್ಯಾಯವು ಬಿಜೆಪಿಗರಿಗೆ ಕಾಣುತ್ತಿಲ್ಲವೇ? ಕನ್ನಡಿಗರಿಗೆ ನ್ಯಾಯ ಸಿಗುವುದು ಬಿಜೆಪಿಗೆ ಬೇಕಿಲ್ಲವೇ?

ಕರ್ನಾಟಕದ ವಿಷಯದಲ್ಲಿ ಕೇಂದ್ರ ಸರ್ಕಾರದ ಸಾಲು ಸಾಲು ಅನ್ಯಾಯಗಳನ್ನು ಮರೆಮಾಚಲು, ಬಜೆಟ್ ನಲ್ಲಿ ಕರ್ನಾಟಕಕ್ಕೆ ನಯಾಪೈಸೆ ಅನುದಾನ ಕೊಡದೆ ದ್ರೋಹ ಭಗೆದ ವಿಷಯವನ್ನು ಮರೆಮಾಚಲು ಪಾದಯಾತ್ರೆ ಎಂಬ ನಾಟಕ ಶುರು ಮಾಡಿದೆ .

ಬಿಜೆಪಿ ಮೇಕೆದಾಟು ಯೋಜನೆಗೆ ಅನುಮತಿ ಕೊಡದೆ ದ್ರೋಹ ಮಾಡಿದ್ದರ ಬಗ್ಗೆ ಪಾದಯಾತ್ರೆ ಯಾವಾಗ? ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಅನುದಾನ ನೀಡದ ಬಗ್ಗೆ ಪಾದಯಾತ್ರೆ ಯಾವಾಗ ? ಬಜೆಟ್ ನಲ್ಲಿ ಕರ್ನಾಟಕಕ್ಕೆ ಒಂದೇ ಒಂದು ಯೋಜನೆ ಘೋಷಿಸದ, ಒಂದೇ ಒಂದು ಪೈಸೆ ಅನುದಾನ ನೀಡದ ಬಗ್ಗೆ ಪಾದಯಾತ್ರೆ ಯಾವಾಗ? ಹಿಂದೆ ಬಿಜೆಪಿ ಆಡಳಿತಾವಧಿಯಲ್ಲೇ ಕರ್ನಾಟಕದ ಪ್ರವಾಹಕ್ಕೆ ಪರಿಹಾರ ಕೊಡದಿರುವುದನ್ನು ಖಂಡಿಸಿ ಪಾದಯಾತ್ರೆ ಮಾಡುವುದು ಯಾವಾಗ? ಬಿಜೆಪಿಗರು ಉತ್ತರಿಸುವರೇ? ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ವಾಗ್ದಾಳಿ ನಡೆಸಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!