Ad imageAd image

ಪೆನ್ನು ಕದ್ದ ಎಂದು ವಿದ್ಯಾರ್ಥಿಯನ್ನು ರೂಮಿನಲ್ಲಿ ಕೂಡಿ ಹಾಕಿ ಮನಬಂದಂತೆ ಥಳಿಸಿದ ಗುರೂಜಿ

Bharath Vaibhav
ಪೆನ್ನು ಕದ್ದ ಎಂದು ವಿದ್ಯಾರ್ಥಿಯನ್ನು ರೂಮಿನಲ್ಲಿ ಕೂಡಿ ಹಾಕಿ ಮನಬಂದಂತೆ ಥಳಿಸಿದ ಗುರೂಜಿ
WhatsApp Group Join Now
Telegram Group Join Now

ರಾಯಚೂರು : ಪೆನ್ನು ಕದ್ದ ಎಂಬ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಯನ್ನು ರೂಮಿನಲ್ಲಿ ಕೂಡಿ ಹಾಕಿ ಮನಬಂದಂತೆ ಥಳಿಸಿ ವಿಕೃತಿ ಮೆರೆದ ಗುರೂಜಿಯನ್ನು ಪೊಲೀಸರು ಬಂಧಿಸಿದ್ದಾರೆ.

ರಾಯಚೂರಿನ ರಾಮಕೃಷ್ಣ ಆಶ್ರಮದ ಗುರೂಜಿ ಇಂತಹ ಕೃತ್ಯ ಎಸಗಿದ್ದು,ವಿದ್ಯಾರ್ಥಿಯನ್ನು ಥಳಿಸಿ, ಕೂಡಿಹಾಕಿ ಅಮಾನವೀಯವಾಗಿ ನಡೆದುಕೊಂಡಿದ್ದರು.ಈ ಹಿನ್ನೆಲೆ ವಿಕೃತ ಗುರೂಜಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶ್ರವಣ ಕುಮಾರ್ ಎಂಬ ವಿದ್ಯಾರ್ಥಿ ಹಲ್ಲೆಗೊಳಗಾಗಿದ್ದು, ಗುರೂಜಿ ಹೊಡೆದ ಏಟಿಗೆ ಬಾಲಕನ ಕಣ್ಣುಗಳು, ಮುಖ ಊದಿಕೊಂಡಿವೆ.

ಆಶ್ರಮದಲ್ಲಿ ತಂಗಿದ್ದ ಶ್ರವಣ ಕುಮಾರ್ ಸಹಪಾಠಿಗಳ ಜೊತೆ ಆಟವಾಡುತ್ತ ಪೆನ್ನು ಕದ್ದಿದ್ದನಂತೆ. ಈ ವಿಚಾರವನ್ನು ಸಹಪಾಠಿಗಳು ಆಶ್ರಮದ ಗುರೂಜಿಗೆ ತಿಳಿಸಿದ್ದಾರೆ. ಆಶ್ರಮದ ಗುರೂಜಿ ವೇಣುಗೋಪಾಲ ಎಂಬುವವರು ವಿದ್ಯಾರ್ಥಿ ಶ್ರವಣ ಕುಮಾರ್ ನನ್ನು ಕರೆದು ವಿಚಾರಿಸಿ ಥಳಿಸಿದ್ದಾರೆ.

3-4 ದಿನ ಕತ್ತಲೆ ಕೋಣೆಯಲ್ಲಿ ಕೂಡಿ ಕಣ್ಣುಗುಡ್ಡೆಗಳಿಗೆ ಏಟು ಕೊಟ್ಟು ಮನಬಂದಂತೆ ಥಳಿಸಿ ವಿಕೃತಿ ಮೆರೆದಿದ್ದಾರೆ.ಪಶ್ಚಿಮ ಠಾಣೆ ಪೊಲೀಸರು ಆರೋಪಿ ಗುರೂಜಿ ವೇಣುಗೋಪಾಲನನ್ನ ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!