Ad imageAd image

ಇನೋವಾ ಡಿಕ್ಕಿಯಾಗಿ ಬೈಕ್ ನ 2 ಕಿ.ಮೀ ಎಳೆದೊಯ್ದು ಕಾರು : ವಕೀಲ ಸಾವು 

Bharath Vaibhav
ಇನೋವಾ ಡಿಕ್ಕಿಯಾಗಿ ಬೈಕ್ ನ 2 ಕಿ.ಮೀ ಎಳೆದೊಯ್ದು ಕಾರು : ವಕೀಲ ಸಾವು 
WhatsApp Group Join Now
Telegram Group Join Now

ವಿಜಯಪುರ: ಇನೋವಾ ವಾಹನ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿದ್ದ ವಕೀಲ ಸಾವು ಕಂಡ ಘಟನೆ ವಿಜಯಪುರದ ಬಸವನನಗರದ ಬಳಿ ನಡೆದಿದೆ.

ಎರಡೂವರೆ ಕಿಲೋಮೀಟರ್ ಸವಾರನನ್ನು ವಾಹನ ಚಾಲಕ ಬಸವನಗರದಿಂದ ಜಿಲ್ಲಾ ಪಂಚಾಯಿತಿ ಪ್ರವೇಶ ದ್ವಾರದವರೆಗೆ ಕಾರ್ ಚಾಲಕ ಎಳೆದುಕೊಂಡು ಹೋಗಿದ್ದಾನೆ.ದ್ವಿಚಕ್ರ ವಾಹನದಲ್ಲಿದ್ದ ವಕೀಲ ರವಿ ಮೇಲಿನಮನಿ(37) ಸಾವನ್ನಪ್ಪಿದ್ದಾರೆ.

ಅವರು ಭೀಮಾ ತೀರದ ಹಂತಕ ಕುಖ್ಯಾತಿಯ ಭಾಗಪ್ಪನ ಸಂಬಂಧಿಕನಾಗಿದ್ದಾರೆ. ಘಟನೆಯ ಬಳಿಕ ಇನೋವಾ ವಾಹನ ಸಮೇತ ಚಾಲಕ ಪರಾರಿಯಾಗಿದ್ದಾನೆ. ಇದು ಅಪಘಾತವಲ್ಲ, ವ್ಯವಸ್ಥಿತವಾಗಿ ರವಿ ಮೇಲಿನಮನಿ ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಘಟನಾ ಸ್ಥಳಕ್ಕೆ ಎಸ್‌ಪಿ ಋಷಿಕೇಶ ಸೋನೆವಣೆ, ಎಸ್ಪಿ ಶಂಕರ ಮಾರಿಹಾಳ ಡಿವೈಎಸ್ಪಿ ಬಸವರಾಜ ಯಲಿಗಾರ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯ ಬಳಿಕ ಘಟನೆಯ ಕುರಿತು ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ಎಸ್.ಪಿ. ತಿಳಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!