Ad imageAd image

ಹೋಗ್ಲಿ ಬಿಡು, ಹೋಗ್ಲಿ ಬಿಡು ಎಂದು ಹೇಳ್ತಿದ್ದೆ. ಅದೇ ನನಗೆ ಈಗ ಮುಳ್ಳಾಗ್ತಿದೆ. : ಸಿದ್ದರಾಮಯ್ಯ 

Bharath Vaibhav
ಹೋಗ್ಲಿ ಬಿಡು, ಹೋಗ್ಲಿ ಬಿಡು ಎಂದು ಹೇಳ್ತಿದ್ದೆ. ಅದೇ ನನಗೆ ಈಗ ಮುಳ್ಳಾಗ್ತಿದೆ. : ಸಿದ್ದರಾಮಯ್ಯ 
siddaramaiah
WhatsApp Group Join Now
Telegram Group Join Now

ಮೈಸೂರು: ತಪ್ಪೇ ಮಾಡದ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಾ ಬೀದಿ ಬೀದಿ ಸುತ್ತಿದ್ದಾರೆ. ಇನ್ಮುಂದೆ ವಿಪಕ್ಷ ನಾಯಕರ ಮೇಲೆ ಯಾವುದೇ ಕರುಣೆ ತೋರಲ್ಲ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನು ಈಗ ಮೊದಲಿನ ಸಿದ್ದರಾಮಯ್ಯ ಅಲ್ಲ, ಇನ್ಮುಂದೆ ವಿಪಕ್ಷದ ಯಾವ ನಾಯಕರ ಮೇಲೂ ಕರುಣೆ ತೋರಲ್ಲ.ಎಲ್ಲರ ಬಗ್ಗೆ ಹೋಗ್ಲಿ ಬಿಡು, ಹೋಗ್ಲಿ ಬಿಡು ಎಂದು ನಾನು ಹೇಳ್ತಿದ್ದೆ. ಅದೇ ನನಗೆ ಈಗ ಮುಳ್ಳಾಗ್ತಿದೆ. ಇನ್ಮುಂದೆ ವಿಪಕ್ಷಗಳ ಎಲ್ಲಾ ನಾಯಕರ ಹಳೇ ಕಥೆಗಳನ್ನು ಓಪನ್ ಮಾಡ್ತೇವೆ ಎಂದು ಗುಡುಗಿದರು.

ತಪ್ಪು ಮಾಡದ ನನ್ನ ಮೇಲೆ ಬೀದಿ ಬೀದಿ ಸುತ್ತಿಕೊಂಡು ಸುಳ್ಳು ಆರೋಪ ಹಬ್ಬಿಸಿ, ಹೆಸರು ಕೆಡಿಸುವ ಕೆಲಸ ಮಾಡಿದ್ದಾರೆ. ಈ ವಿಚಾರದಲ್ಲಿ ನಾನಿನ್ನೂ ತಾಳ್ಮೆಯಿಂದ ಇರಲ್ಲ. ವಿಪಕ್ಷಗಳ ಯಾವ ನಾಯಕರ ಒತ್ತಡಕ್ಕೂ ಮಣಿಯುವ ಪ್ರಶ್ನೆ ಇಲ್ಲ ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!