Ad imageAd image

ತಡರಾತ್ರಿ ಬೆಂಗಳೂರಿನಲ್ಲಿ ಕಾರಿಗೆ ಬೈಕ್ ಟಚ್ ಆಗಿದ್ದಕ್ಕೆ ಕಾರಿನಿಂದ ಗುದ್ದಿ ಸವಾರನ ಕೊಲೆ

Bharath Vaibhav
ತಡರಾತ್ರಿ ಬೆಂಗಳೂರಿನಲ್ಲಿ ಕಾರಿಗೆ ಬೈಕ್ ಟಚ್ ಆಗಿದ್ದಕ್ಕೆ ಕಾರಿನಿಂದ ಗುದ್ದಿ ಸವಾರನ ಕೊಲೆ
WhatsApp Group Join Now
Telegram Group Join Now

ಬೆಂಗಳೂರು : ಬೆಂಗಳೂರಿನಲ್ಲಿ ತಡರಾತ್ರಿ ಅಮಾನುಷ ಕೃತ್ಯ ನಡೆದಿದ್ದು, ಕಾರಿಗೆ ಬೈಕ್ ಟಚ್ ಆಗಿದ್ದಕ್ಕೆ ಬೈಕ್ ಸವಾರನನ್ನು ಕಾರಿನಿಂದ ಬೈಕ್ ಗೆ ಗುದ್ದಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಬೆಂಗಳೂರಿನ ವಿದ್ಯಾರಾಣ್ಯಪುರದಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಕಾರಿಗೆ ಬೈಕ್ ಟಚ್ ಆಗಿದೆ.

ಈ ವೇಳೆ ಕಾರಿನಲ್ಲಿದ್ದ ಯುವಕರ ಗುಂಪು ಬೈಕ್ ಸವಾರನೊಂದಿಗೆ ಕಿರಿಕ್ ಮಾಡಿದೆ. ಬಳಿಕ ಬೈಕ್ ಸವಾರನನ್ನು ಚೇಸ್ ಮಾಡಿ ಗುದ್ದಿ ಕೊಲೆ ಮಾಡಲಾಗಿದೆ.

ಈ ವೇಳೆ ಬೈಕ್ ಸವಾರ ಮಹೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಹೇಶ್, ಬಾಲಾಜಿ ಹಾಗೂ ನಿಖಿಲ್ ಎಂಬುವರು ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾರಿಗೆ ಬೈಕ್ ಟಚ್ ಆಗಿದೆ. ಹೀಗಾಗಿ ಕಾರಿನಲ್ಲಿದ್ದ ಅರವಿಂದ್, ಕೇಶವ್ ಎಂಬುವರು ಬೈಕ್ ಸವಾರರೊಂದಿಗೆ ಕಿರಿಕ್ ತೆಗೆದು ಬಳಿಕ ಕಾರನ್ನು ಚೇಸ್ ಮಾಡಿ ಕಾರಿನಿಂದ ಬೈಕ್ ಗೆ ಗುದ್ದಿದ್ದಾರೆ. ಈ ವೇಳೆ ಮಹೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಬಾಲಾಜಿ ಹಾಗೂ ನಿಖಿಲ್ ಗಾಯಗೊಂಡಿದ್ದಾರೆ. ವಿದ್ಯಾರಾಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!