Ad imageAd image

ಹೆಂಡತಿ ರೀಲ್ಸ್ ಹುಚ್ಚಿಗೆ ಬೇಸತ್ತು ಕೊಚ್ಚಿ ಕೊಲೆಗೈದ ಗಂಡ 

Bharath Vaibhav
ಹೆಂಡತಿ ರೀಲ್ಸ್ ಹುಚ್ಚಿಗೆ ಬೇಸತ್ತು ಕೊಚ್ಚಿ ಕೊಲೆಗೈದ ಗಂಡ 
WhatsApp Group Join Now
Telegram Group Join Now

ಉಡುಪಿ : ಮೊಬೈಲ್‌ ನೋಡೋದು, ರೀಲ್ಸ್‌ ಮಾಡೋದ್ರಲ್ಲೇ ಮೈಮರೆಯುತ್ತಿದ್ದ ಸುಂದರಿ ಪತ್ನಿಯನ್ನು ಕೊಂದಿರುವ ಪತಿ, ಮನೆಯಲ್ಲೇ ಕುಳಿತಿದ್ದನಂತೆ.ಉಡುಪಿ ಜಿಲ್ಲೆಯ ಕೋಟಾ ಸಮೀಪದ ಕಾರ್ಕಡದಲ್ಲಿ ನಡೆದಿದೆ.

31 ವರ್ಷದ ಜಯಶ್ರೀಯನ್ನು ಗಂಡ ಕಿರಣ್‌ ಉಪಾಧ್ಯ ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ..ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ ಕಿರಣ್‌ ಉಪಾಧ್ಯ ಗುರು ನರಸಿಂಹ ದೇವಸ್ಥಾನದಲ್ಲಿ ಎರಡು ವರ್ಷದಿಂದ ಅಡುಗೆ ಕೆಲಸ ಮಾಡುತ್ತಿದ್ದ.. 3 ತಿಂಗಳ ಹಿಂದಷ್ಟೇ ದಂಪರಿ ತಾರಾನಾಥ್‌ ಅವರ ಮನೆಗೆ ಬಾಡಿಗೆಗೆ ಬಂದಿದ್ದರು ಎಂದು ತಿಳಿದುಬಂದಿದೆ.. ಕೊಲೆಯಾದ ಜಯಶ್ರೀ ಬೀದರ್‌ ಜಿಲ್ಲೆಯ ದೊಣಗಾಪುರ ಮೂಲದವರು ಎಂದು ತಿಳಿದುಬಂದಿದೆ.

ಪತ್ನಿಗೆ ಮೊಬೈಲ್‌ ಹುಚ್ಚು ಜಾಸ್ತಿಯಾಗಿರುವುದರಿಂದ ಇಬ್ಬರು ನಡುವೆ ಇದೇ ವಿಚಾರಕ್ಕೆ ಜಗಳವಾಗುತ್ತಿತ್ತು ಎನ್ನಲಾಗಿದೆ.. ಇದು ತಾರಕಕ್ಕೇರಿ ಆರೋಪಿ ಕತ್ತಿಯಿಂದ ಕೊಚ್ಚಿ ಪತ್ನಿಯನ್ನು ಕೊಲೆ ಮಾಡಿದ್ದಾನೆ.. ಅನಂತರ ಎಲ್ಲಿಗೂ ಹೋಗದೇ ಮನೆಯಲ್ಲೇ ಕುಳಿತಿದ್ದ ಎನ್ನಲಾಗಿದೆ.. ವಿಷಯ ತಿಳಿದ ಕೋಟಾದ ಪೊಲೀಸರು ಬಂದು ಆತನನ್ನು ಬಂಧಿಸಿದ್ದಾರೆ..

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!