Ad imageAd image

ಯಾದವ ಸಂಘದಿಂದ ಶ್ರೀಕೃಷ್ಣನ ಕೈ ಥೇರಿನ ರಥೋತ್ಸವ

Bharath Vaibhav
ಯಾದವ ಸಂಘದಿಂದ ಶ್ರೀಕೃಷ್ಣನ ಕೈ ಥೇರಿನ ರಥೋತ್ಸವ
WhatsApp Group Join Now
Telegram Group Join Now

ತುರುವೇಕೆರೆ: ತಾಲೂಕು ಶ್ರೀ ಕೃಷ್ಣ ಯಾದವ(ಗೊಲ್ಲ) ಸಂಘದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀಕೃಷ್ಣನ ಕೈಥೇರಿನ ರಥೋತ್ಸವ ಅದ್ದೂರಿಯಾಗಿ ನೆರವೇರಿಸಲಾಯಿತು.

ಪಟ್ಟಣದ ಶ್ರೀ ಬೇಟೇರಾಯಸ್ವಾಮಿ ದೇವಸ್ಥಾನದ ಬಳಿ ಶ್ರೀಕೃಷ್ಣನ ಕೈಥೇರಿನ ರಥವನ್ನು ಎಳೆದ ಭಕ್ತವೃಂದ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನೆರವೇರಿಸಿದರು.

ಸಂಜೆ 4ಗಂಟೆಗೆ ಶ್ರೀ ಮಹಾಲಕ್ಷ್ಮೀ ಬೇಟೇರಾಯಸ್ವಾಮಿ ದೇವರೊಂದಿಗೆ ಶ್ರೀಕೃಷ್ಣಸ್ವಾಮಿಯವರ ಜಲಕ್ರೀಡೆ ಉತ್ಸವವನ್ನು ನಡೆಸಲಾಯಿತು. ನಂತರ ಮಹಾಮಂಗಳಾರತಿ ನೆರವೇರಿಸಿ ಪ್ರಸಾದ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪಪಂ ಸದಸ್ಯ ಪ್ರಭಾಕರ್, ಯಾದವ ಸಮಾಜದ ಚಂದ್ರಶೇಖರ್, ಸತೀಶ್, ಪ್ರಭಾಕರ್, ರಾಘು, ಸಾಗರ್ ಸೇರಿದಂತೆ ನೂರಾರು ಮಂದಿ‌ ಉಪಸ್ಥಿತರಿದ್ದರು.

ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!